ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಝಾಕಿಯಾ ಕೊಲೆ ಖಂಡಿಸಿ ಧಾರವಾಡದಲ್ಲಿ ಕ್ಯಾಂಡಲ್ ಮಾರ್ಚ್

ಧಾರವಾಡ: ಮೊನ್ನೆಯಷ್ಟೇ ತನ್ನ ಪ್ರಿಯಕರನಿಂದ ಕೊಲೆಗೀಡಾದ ಝಾಕಿಯಾ ಹತ್ಯೆ ಖಂಡಿಸಿ ಧಾರವಾಡದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರು ಧಾರವಾಡದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿದರು.

ಧಾರವಾಡದ ಕಲಾಭವನದಿಂದ ಕ್ಯಾಂಡಲ್ ಮಾರ್ಚ್ ನಡೆಸಿದ ಮುಖಂಡರು ಅಲ್ಲಿಂದ ಸುಭಾಷ ರಸ್ತೆ ಮೂಲಕ ಹಾದು ಜ್ಯುಬಿಲಿ ವೃತ್ತದವರೆಗೂ ಮೆರವಣಿಗೆ ನಡೆಸಿದರು.

ಜಸ್ಟಿಸ್ ಫಾರ್ ಝಾಕಿಯಾ ಎಂದು ಫಲಕ ಹಿಡಿದು ಜ್ಯುಬಿಲಿ ವೃತ್ತದಿಂದ ಅಂಜುಮನ್ ಸಂಸ್ಥೆವರೆಗೂ ಸಾಗಿದರು. ಕೊಲೆ ಮಾಡಿದ ಸಾಬೀರ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರು ಈ ಸಂದರ್ಭದಲ್ಲಿ ಆಗ್ರಹಿಸಿದರು.

Edited By : PublicNext Desk
Kshetra Samachara

Kshetra Samachara

23/01/2026 08:21 pm

Cinque Terre

16.39 K

Cinque Terre

2

ಸಂಬಂಧಿತ ಸುದ್ದಿ