ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: ​ಕೌಲಗುಡ್ಡದ ನಿಗೂಢ ಬೆಂಕಿ!; ವಿಜ್ಞಾನಕ್ಕೆ ಸವಾಲು, ಮಾಟ ಮಂತ್ರ ಭೀತಿಯಲ್ಲಿ ಗ್ರಾಮಸ್ಥರು!

​ಕಾಗವಾಡ: ವಿಜ್ಞಾನ ಮತ್ತು ತಂತ್ರಜ್ಞಾನ ಮುಗಿಲೆತ್ತರಕ್ಕೆ ಬೆಳೆದಿರುವ ಈ ಕಾಲದಲ್ಲೂ, ಕೆಲವು ಘಟನೆಗಳು ತರ್ಕಕ್ಕೆ ನಿಲುಕದೆ ಅಚ್ಚರಿ ಮೂಡಿಸುತ್ತಿವೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ನಡೆಯುತ್ತಿರುವ ನಿಗೂಢ ಘಟನೆಯೊಂದು ಈಗ ಇಡೀ ಊರನ್ನೇ ದಂಗಾಗಿಸಿದೆ.

​ಕೌಲಗುಡ್ಡ ಗ್ರಾಮದ ಹೊರವಲಯದ ತೋಟದಲ್ಲಿ ವಾಸವಿರುವ ಈಶ್ವರ ತೆಗ್ಗಿನ್ನವರ ಎಂಬುವವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿಗೂಢವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮನೆಯ ಒಳಗಿರಲಿ ಅಥವಾ ಸುತ್ತಮುತ್ತಲಿರಲಿ, ಯಾವುದೇ ಕಾರಣವಿಲ್ಲದೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಮನೆಯವರಲ್ಲಿ ಆತಂಕ ಮೂಡಿಸಿದೆ.

​​ಒಂದೆರಡು ಬಾರಿ ಸಂಭವಿಸಿದ್ದರೆ ಆಕಸ್ಮಿಕ ಎನ್ನಬಹುದಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ. ಇದು ಕೇವಲ ಕಾಕತಾಳೀಯವೋ ಅಥವಾ ಇದರ ಹಿಂದೆ 'ಬಾನಾಮತಿ' (ಮಾಟ-ಮಂತ್ರ) ಶಕ್ತಿಗಳ ಕೈವಾಡವಿದೆಯೋ ಎನ್ನುವ ಚರ್ಚೆ ಗ್ರಾಮದಲ್ಲಿ ಜೋರಾಗಿ ನಡೆಯುತ್ತಿದೆ.

​​ಡಿಜಿಟಲ್ ಯುಗದಲ್ಲಿ ಇಂತಹ ಘಟನೆಗಳು ನಂಬಲು ಅಸಾಧ್ಯವೆನಿಸಿದರೂ, ಪ್ರತ್ಯಕ್ಷದರ್ಶಿಗಳ ಕಣ್ಣ ಮುಂದೆಯೇ ಬೆಂಕಿ ಹೊತ್ತಿಕೊಳ್ಳುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಬಗ್ಗೆ ವೈಜ್ಞಾನಿಕ ತನಿಖೆಯ ಅಗತ್ಯವಿದೆ ಎಂದು ಪ್ರಜ್ಞಾವಂತರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಒಂದು ಪ್ರತ್ಯಕ್ಷ

​ವರದಿ ನಮ್ಮ ಪ್ರತಿನಿಧಿ ಲಕ್ಷ್ಮಣ ಕೋಳಿ ಅವರಿಂದ.

Edited By : Manjunath H D
PublicNext

PublicNext

08/03/2026 12:56 pm

Cinque Terre

20.39 K

Cinque Terre

0

ಸಂಬಂಧಿತ ಸುದ್ದಿ