ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಕೆ.ಆರ್.ನಗರ ತಾಲ್ಲೂಕು ಆಡಳಿತದ ವಿಳಂಬ ಧೋರಣೆ- ರೈತನ 'ನಿದ್ರೆ' ಪ್ರತಿಭಟನೆ

​ಮೈಸೂರು: ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳಿಗಾಗಿ ಸಾರ್ವಜನಿಕರನ್ನು ಅಲೆದಾಡಿಸುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ, ರೈತರೊಬ್ಬರು ವಿನೂತನವಾಗಿ ಪ್ರತಿಭಟಿಸಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ನಡೆದಿದೆ.

​​ಕೆ.ಆರ್. ನಗರ ತಾಲ್ಲೂಕಿನ ಅರ್ಜುನಳ್ಳಿ ಗ್ರಾಮದ ರೈತ ರಾಮ್ ಪ್ರಸಾದ್ ಎಂಬುವವರು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿಯೇ ಚಾಪೆ, ದಿಂಬು ಹಾಸಿ, ರಗ್ಗು ಹೊದ್ದುಕೊಂಡು 'ನಿದ್ರೆ' ಮಾಡುವ ಮೂಲಕ ಆಡಳಿತ ವೈಖರಿಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

​ ತಾಲ್ಲೂಕು ಆಡಳಿತವು ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿದ್ದಾರೆ ಎಂಬುದು ಪ್ರತಿಭಟನೆ ನಿರತ ರೈತನ ಪ್ರಮುಖ ಆರೋಪ.

​ತಮ್ಮ ಕೆಲಸಗಳಿಗಾಗಿ ರೈತರು ಹತ್ತಾರು ಬಾರಿ ಕಚೇರಿಗೆ ಅಲೆದರೂ, ಅಧಿಕಾರಿಗಳು ಕಷ್ಟಗಳನ್ನು ಕೇಳುತ್ತಿಲ್ಲ ಮತ್ತು ಕೆಲಸ ಮಾಡಿಕೊಡಲು ಹಿಂದೇಟು ಹಾಕುತ್ತಿದ್ದಾರೆ.

​ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದೆ ವಿನಾಕಾರಣ ಅಲೆದಾಡಿಸುತ್ತಿರುವ ತಾಲ್ಲೂಕು ಆಡಳಿತದ ಕಾರ್ಯವೈಖರಿಗೆ ರೈತ ರಾಮ್ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​"ಅಧಿಕಾರಿಗಳೇ ನಿದ್ರೆ ಮಾಡುತ್ತಿರುವಾಗ, ನಾವೂ ನಿದ್ರೆ ಮಾಡುವ ಮೂಲಕವೇ ಅವರಿಗೆ ಎಚ್ಚರಿಕೆ ನೀಡಬೇಕು" ಎಂಬ ಉದ್ದೇಶದಿಂದ ಈ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Vinayak Patil
PublicNext

PublicNext

16/03/2026 03:37 pm

Cinque Terre

9.58 K

Cinque Terre

0

ಸಂಬಂಧಿತ ಸುದ್ದಿ