ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾವಿಗೀಡಾಗಿದ್ದ ರಾಸುಗಳಿಗೆ ಮುಕ್ತಿ ನೀಡಿದ ಜುಬೇರ್

ಧಾರವಾಡ: ಧಾರವಾಡದ ಪತ್ರೇಶ್ವರ ದೇವಸ್ಥಾನದ ದಾಟಿ ಮುಂದೆ ಹೋಗುತ್ತಿದ್ದಂತೆ ರಸ್ತೆಯಲ್ಲಿ ಸಾವಿಗೀಡಾಗಿ ಬಿದ್ದಿದ್ದ ನಾಲ್ಕು ರಾಸುಗಳಿಗೆ ಜುಬೇರ್ ಹಾಗೂ ಅವರ ಗೆಳೆಯರು ಮುಕ್ತಿ ನೀಡಿದ್ದಾರೆ.

ಹೌದು! ಈ ರಸ್ತೆಯಲ್ಲಿ ಕಸ ಚೆಲ್ಲುವುದರೊಂದಿಗೆ ಸಾವಿಗೀಡಾದ ಜಾನುವಾರುಗಳನ್ನೂ ಹಾಗೇ ತಂದು ಎಸೆದು ಹೋಗುತ್ತಾರೆ. ಗುರುವಾರ ಸಹ ಸಾವಿಗೀಡಾದ ನಾಲ್ಕು ರಾಸುಗಳನ್ನು ಯಾರೋ ತಂದು ರಸ್ತೆಯ ಪಕ್ಕವೇ ಹಾಗೇ ಎಸೆದು ಹೋಗಿದ್ದರು.

ಈ ವಿಷಯ ಅರಿತ ಜುಬೇರ್ ಎಂಬುವವರು ತಮ್ಮ ಸ್ನೇಹಿತರೊಡಗೂಡಿ ಜೆಸಿಬಿ ಸಹಾಯದಿಂದ ಗುಂಡಿ ತೋಡಿ ಆ ರಾಸುಗಳನ್ನು ಮಣ್ಣು ಮಾಡುವ ಮೂಲಕ ಆ ರಾಸುಗಳಿಗೆ ಮುಕ್ತಿ ನೀಡಿದ್ದಾರೆ.

Edited By : Vinayak Patil
Kshetra Samachara

Kshetra Samachara

26/03/2026 09:21 pm

Cinque Terre

57.79 K

Cinque Terre

3

ಸಂಬಂಧಿತ ಸುದ್ದಿ