ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ: ​ಡಾ. ಪ್ರದೀಪ್ ಕೆಂಜಿಗೆ ಅವರ 'ನರವಾನರ' ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಮೂಡಿಗೆರೆ: ಡಾ. ಪ್ರದೀಪ್ ಕೆಂಜಿಗೆ ಅವರ 'ನರವಾನರ' ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಲಭಿಸಿದೆ. 2024ರಲ್ಲಿ ಪ್ರಕಟವಾದ ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳ ಪೈಕಿ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಈ ಪುಸ್ತಕವು ಸಂಕೀರ್ಣ ಪ್ರಕಾರದಲ್ಲಿ ಈ ಗೌರವಕ್ಕೆ ಪಾತ್ರವಾಗಿದೆ.

ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು, ಫಲಕ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. ​ಈ ಕೃತಿಯು ಚಿಂಪಾಂಜಿಗಳ ಜೀವನವಿಧಾನ ಮತ್ತು ನಡವಳಿಕೆಗಳನ್ನು ವಿಶ್ಲೇಷಿಸುವ ವೈಜ್ಞಾನಿಕ ಬರಹವಾಗಿದ್ದು, ಜೀವ ವಿಜ್ಞಾನದ ಸಂಶೋಧನೆಗಳನ್ನು ಮತ್ತು ಪ್ರಕೃತಿಯ ವಿಸ್ಮಯಗಳನ್ನು ಓದುಗರಿಗೆ ಮನಮುಟ್ಟುವಂತೆ ಪರಿಚಯಿಸುತ್ತದೆ. ಡಾ. ಪ್ರದೀಪ್ ಕೆಂಜಿಗೆ ಅವರು ಈ ಹಿಂದೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಪ್ಯಾಪಿಲಾನ್ ಮತ್ತು ವಿಸ್ಮಯ ಸರಣಿಯ ಕೃತಿಗಳನ್ನು ರಚಿಸಿದ್ದು, ಬರ್ಮುಡಾ ಟ್ರಯಾಂಗಲ್ ಹಾಗೂ ಅದ್ಭುತಯಾನದಂತಹ ಸ್ವತಂತ್ರ ಕೃತಿಗಳನ್ನೂ ಪ್ರಕಟಿಸಿದ್ದಾರೆ.

ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆಯ ಕುರಿತು ಪಿಎಚ್‌ಡಿ ಸಂಶೋಧನೆ ಮಾಡಿರುವ ಇವರು, ಸದ್ಯ ಕೆಫೆ ಕಾಫಿ ಡೇ ಸಂಸ್ಥೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Edited By : PublicNext Desk
PublicNext

PublicNext

27/03/2026 09:39 am

Cinque Terre

4.25 K

Cinque Terre

0

ಸಂಬಂಧಿತ ಸುದ್ದಿ