ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯತ್ನಾಳ ಒಬ್ಬ ಹುಚ್ಚ: ಕಾಂಗ್ರೆಸ್ ಶಾಸಕ ಆಸೀಫ್ ಸೇಠ್

ಬೆಳಗಾವಿ : ಮುಸ್ಲಿಂ ಮತ ಬಿಜೆಪಿಗೆ ಬೇಡ ಎನ್ನುವ ಯತ್ನಾಳ್ ಒಬ್ಬ ಹುಚ್ಚ ಎಂದು ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಎರಡು ಕಡೆ ನಾವೇ ಗೆಲ್ಲುತ್ತೇವೆ. ಜಿಲ್ಲಾ ಸಚಿವರು ಬಾಗಲಕೋಟೆಯಲ್ಲಿ ಇದ್ದಾರೆ. ಯತ್ನಾಳ ಒಬ್ಬ ಹುಚ್ಚ ಅವನ ಮಾತು ಏನ್ ಕೇಳತ್ತಿರಾ. ಇದು ತಪ್ಪು ಕಲ್ಪನೆಯಿಂದ ದೇಶ ಹಾಳಾಗುತ್ತಿದೆ. ಇವರು ಬೇಡ, ಅವರು ಬೇಡ ಒಡೆದು ಹಾಳುತ್ತಿದ್ದಾರೆ.

ಅವರು‌ ಹೇಳಲಿ ಎಲ್ಲರೂ ಒಗ್ಗಟ್ಟು ಆಗೋಣ ಅಂತ. ಅಸೆಂಬ್ಲಿಯಲ್ಲಿ ಒಳ್ಳೆಯ ರೀತಿಯಲ್ಲಿ ಮಾತನಾಡುತ್ತಾರೆ. ಅವರ ಮಾತಿನಿಂದ ರಾಜ್ಯ ದೇಶಕ್ಕೆ ನಷ್ಟ ಇದೆ ಎಂದು ಅಸಮಾಧಾನ ಹೊರಹಾಕಿದರು.

Edited By : Somashekar
PublicNext

PublicNext

03/04/2026 05:12 pm

Cinque Terre

17.65 K

Cinque Terre

2

ಸಂಬಂಧಿತ ಸುದ್ದಿ