ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಮದುವೆ ಮೆರವಣಿಗೆ ವೇಳೆ ಪಟಾಕಿ ದುರಂತ, ರೈತನ ಎರಡು ಬೃಹತ್ ಬಣವೆಗಳು ಭಸ್ಮ

ಬಳ್ಳಾರಿ: ಮದುವೆ ಮೆರವಣಿಗೆ ವೇಳೆ ಸಿಡಿಸಿದ ಪಟಾಕಿಗಳಿಂದ ಉಂಟಾದ ಬೆಂಕಿ ಅವಘಡದಲ್ಲಿ ರೈತನಿಗೆ ಸೇರಿದ ಎರಡು ಬೃಹತ್ ಬಣವೆಗಳು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಕೆ.ವೀರಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗಾದಿಲಿಂಗಪ್ಪ ಅವರಿಗೆ ಸೇರಿದ ಬಣವೆಗಳಲ್ಲಿ ಜಾನುವಾರುಗಳಿಗಾಗಿ ಸುಮಾರು ₹1 ಲಕ್ಷ ವೆಚ್ಚದಲ್ಲಿ ಸಂಗ್ರಹಿಸಿಟ್ಟಿದ್ದ ಮೇವು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮದುವೆ ಮೆರವಣಿಗೆ ವೇಳೆ ಸಿಡಿಸಿದ ಪಟಾಕಿಗಳ ಕಿಡಿಗಳು ಬಣವಿಗಳಿಗೆ ತಗುಲಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಸಾರ್ವಜನಿಕರು ನಂದಿಸಲು ಹರಸಾಹಸಪಟ್ಟರೂ, ಅಗ್ನಿ ತೀವ್ರತೆ ಹೆಚ್ಚಿದ್ದರಿಂದ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಅಗ್ನಿಶಾಮಕ ದಳದ ವಾಹನ ತಡವಾಗಿ ಸ್ಥಳಕ್ಕೆ ಆಗಮಿಸಿದ್ದರಿಂದ ಬಣವಿಗಳಲ್ಲಿದ್ದ ಮೇವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪರಮದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಹೊನ್ನುರಸ್ವಾಮಿ ಕೆ.ಟಿ. ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ

Edited By :
PublicNext

PublicNext

24/04/2026 11:31 am

Cinque Terre

10.85 K

Cinque Terre

0

ಸಂಬಂಧಿತ ಸುದ್ದಿ