ಬೆಂಗಳೂರು: ಹವಾಮಾನ ಮುನ್ಸೂಚನೆಯಂತೆ ಇಂದು ಅವಧಿಗೂ ಮುನ್ನವೇ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದೆ! ವಿಪರೀತ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ವಾಹನ ಸವಾರರು ಬೆಚ್ಚಿ ಬೀಳುವಂತೆ ಮಾಡಿತು. ಹಠಾತ್ತನೇ ಶುರುವಾದ ಮಳೆ-ಗಾಳಿಯ ಪರಿಣಾಮ ಸಂಜೆ ಐದರ ಸುಮಾರಿಗೆ ಎಲ್ಲೆಡೆ ಕತ್ತಲೆ ಆವರಿಸಿದಂತಾಯಿತು. ಮಳೆಯ ಹೊಡೆತಕ್ಕೆ ಅಲ್ಲಲ್ಲಿ ಮರಗಳ ರೆಂಬೆ-ಕೊಂಬೆಗಳು ಮುರಿದು ಬಿದ್ದಿರೋದು ಕಂಡು ಬಂತು.
ಮತ್ತೆ ಕೆಲವೆಡೆ ಮರಗಳೇ ಧರಾಶಾಹಿಯಾದ ಬಗ್ಗೆಯೂ ವರದಿಯಾಗಿದೆ. ಒಟ್ಟಿನಲ್ಲಿ ಬಿರು ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರಿನ ಜನತೆಗೆ ಇಂದು ಸುರಿದ ಮಾಘ ಮಳೆ ತಂಪೆರೆದಂತಾಗಿದೆ. ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ವೈಯಾಲಿಕಾವಲ್, ಇಂದಿರಾನಗರ, ಆರ್.ಟಿ.ನಗರ, ಹೆಬ್ಬಾಳ ಸೇರಿದಂತೆ ಮತ್ತಿತರೆಡೆ ಮಳೆ ಜೋರಾಗಿತ್ತು.
PublicNext
29/04/2026 08:01 pm
LOADING...