ಉಡುಪಿ: ಖ್ಯಾತ ಚಲನಚಿತ್ರ ನಟಿ ಹಾಗೂ ರಾಜಕಾರಣಿ ತಾರಾ ಅನುರಾಧ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಕನಕ ನವಗ್ರಹ ಕಿಂಡಿಯ ಮೂಲಕ ಕಡಗೋಲು ಕೃಷ್ಣನ ದರ್ಶನ ಮಾಡಿದರು. ಈವೇಳೆ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಶ್ರೀಮಠದ ವತಿಯಿಂದ ಅವರನ್ನು ಗೌರವಿಸಲಾಯಿತು. ಬಹಳ ಸಮಯದ ನಂತರ ಮಠಕ್ಕೆ ಬಂದಿದ್ದೇನೆ, ಕೃಷ್ಣನ ಆಶೀರ್ವಾದವನ್ನು ಮನ ತುಂಬಾ ಹೊತ್ತು ಸಂಭ್ರಮದಿಂದ ವಾಪಸ್ ಆಗುತ್ತಿದ್ದೇನೆ ಎಂದು ಸಂತೋಷ ಹಂಚಿಕೊಂಡರು.
PublicNext
30/04/2026 10:18 pm
LOADING...