ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಪ್ರಿಲ್ 16ರಿಂದ ಜನಗಣತಿ : ಗಣತಿದಾರರಿಗೆ ವಿಶೇಷ ಕಿಟ್‌ ಹಸ್ತಾಂತರ!

ರಬಕವಿ-ಬನಹಟ್ಟಿ: ಭಾರತ ಜನಗಣತಿ 2027 ಅಂಗವಾಗಿ ಜನಗಣತಿ ಕಾರ್ಯವು ಎ.16 ರಿಂದ ಮೆ.15 ವರೆಗೆ ನಡೆಯುತ್ತಿದೆ. ಗಣತಿದಾರರಿಗೆ ಜನಗಣತಿ ಆಯೋಗವು ಜಿಲ್ಲಾ ಕಚೇರಿಗಳ ಮೂಲಕ ಕಿಟ್‌ಗಳನ್ನು ವಿತರಿಸಿದೆ. ಸದರಿ ಕಿಟ್‌ಗಳನ್ನು ತೇರದಾಳ ತಾಲೂಕಿನ ತಹಶಿಲ್ದಾರ, ಗ್ರಾಮೀಣ ಭಾಗದ ಇನ್‌ಚಾರ್ಜ್ ವಿಜಯಕುಮಾರ ಕಡಕೋಳ ಸೂಪರ್‌ವೈಸರ್ ಮೂಲಕ ಗಣತಿದಾರರಿಗೆ ಕಿಟ್‌ಗಳನ್ನು ಶುಕ್ರವಾರ ವಿತರಿಸಿದರು.

ಈ ಸಂದರ್ಭದಲ್ಲಿ ಸೂಪರ್‌ವೈಸರ್ ಹಾಗೂ ಗಣತಿದಾರರು ಇದ್ದರು. ಸದರಿ ಕಿಟ್‌ಗಳಲ್ಲಿ ಟೋಪಿ, ಬರವಣಿಗೆಗಾಗಿ ಪ್ಯಾಡ್, ಪೆನ್ಸಿಲ್, ರಬ್ಬರ್, ಮಾರ್ಕರ್, ಟೈ, ಕ್ಲಿಪ್ ಇರುವಂತಹ ಬ್ಯಾಗ್‌ಗಳನ್ನು ವಿತರಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

02/05/2026 05:47 pm

Cinque Terre

3.68 K

Cinque Terre

0