ಹೊಸಪೇಟೆ : ವಿಜಯನಗರ ಹೊಸಪೇಟೆಯ ಹೊರವಲಯದಲ್ಲಿರೋ ಐತಿಹಾಸಿಕ ಜೋಳದ ರಾಶಿ ಗುಡ್ಡಕ್ಕೆ ಬೆಂಕಿ ಬಿದ್ದಿದೆ. ಬೆಂಕಿಯ ಕೆನ್ನಾಲಿಗೆಗೆ ಜೋಳದರಾಶಿ ಗುಡ್ಡ ಧಗಧಗನೇ ಹೊತ್ತಿ ಉರಿದಿದೆ. ಬಿಸಿಲಿನ ಧಗೆಗೆ ಕುರುಚಲು ಹುಲ್ಲಿಗೆ ಬೆಂಕಿ ಬಿದ್ದಿದ್ರಿಂದ ಮುಗಿಲೆತ್ತರಕ್ಕೆ ಜೋಳದರಾಶಿ ಗುಡ್ಡ ಸಸ್ಯರಾಶಿ ಧಗಧಗನೇ ಹೊತ್ತಿ ಉರಿದಿದೆ.
ಗುಡ್ಡದಲ್ಲಿರೋ ಪಕ್ಷಿಗಳು, ಸಣ್ಣ ಪ್ರಾಣಿಗಳು ಸುಟ್ಟು ಭಸ್ಮ ಆಗಿವೆ ಎನ್ನಲಾಗಿದೆ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರೋ ಶಂಕೆ ವ್ಯಕ್ತವಾಗಿದೆ. ಇದೆಲ್ಲದರ ಮಧ್ಯೆ ಅರಣ್ಯ ಇಲಾಖೆ ಬೆಂಕಿ ನಂದಿಸಲು ಪ್ರಯತ್ನಿಸಿದ್ರೂ ಹಿಡಿತಕ್ಕೆ ಸಿಗದೇ ಬೆಂಕಿ ಹೊತ್ತಿ ಉರಿದಿದೆ.
PublicNext
02/05/2026 10:48 pm
LOADING...