ಹುಬ್ಬಳ್ಳಿ: ಜನಾ ಮರಳೊ ಜಾತ್ರೆ ಮರಳೊ ಎಂಬಂತೆ, ರಸ್ತೆ ಪಕ್ಕದಲ್ಲೇ ಕಸವನ್ನು ಬೇಕಾಬಿಟ್ಟಿಯಾಗಿ ಎಸೆದು ಹೋಗುತ್ತಿರುವ ಘಟನೆ ಹುಬ್ಬಳ್ಳಿಯ ಲಕ್ಷ್ಮೀ ನಾರಾಯಣ ನಗರದಲ್ಲಿ ನಡೆದಿದೆ.
ಹೌದು,,, ವಿಮಾನ ಆಸ್ಪತ್ರೆಯಿಂದ ಇಂಡಸ್ಟ್ರಿಯಲ್ ಏರಿಯಾಕ್ಕೆ ಹೋಗುವ ರಸ್ತೆ ಲಕ್ಷ್ಮೀ ನಾರಾಯಣ ನಗರದಲ್ಲಿ ಮುಖ್ಯ ರಸ್ತೆಯಲ್ಲಿ ಕಸವನ್ನು ರಾಶಿ ರಾಶಿಯಾಗಿ ಹಾಕಿದ್ದಾರೆ. ಪಕ್ಕದಲ್ಲೇ ಆಸ್ಪತ್ರೆ ಇದೆ ಜನರು ಮಾತ್ರ ಸ್ವಚ್ಛತೆ ಕಾಪಾಡುತ್ತಿಲ್ಲ. ಬೇಕಾಬಿಟ್ಟಿಯಾಗಿ ಕಸ ಹಾಕಿ ಹೋಗುತ್ತಿದ್ದಾರೆ. ಪಾಲಿಕೆಯವರು ಕೂಡ ಕಸ ತೆರವು ಮಾಡುತ್ತಿಲ್ಲ. ಕೂಡಲೇ ಈ ಕಸವನ್ನು ತೆರವು ಮಾಡಿ ಜನರಿಗೆ ಎಚ್ಚರಿಕೆ ನೀಡಬೇಕಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/05/2026 02:10 pm
LOADING...