ಬೆಳಗಾವಿ: ಬೆಳಗಾವಿ ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವರುಣ ಆರ್ಭಟಿಸಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಬಿಸಿಲಿನ ದಗೆಗೆ ಜನ ಹೈರಾಣಾಗಿದ್ದರು, ಆದರೆ ಸಂಜೆ ಆಗುತ್ತಿದ್ದಂತೆ ಗಾಳಿ ಸಹಿತ ಜೋರು ಮಳೆಗೆ ಆಗಿ ಜನ ಜೀವನ ಅಸ್ತವ್ಯಸ್ತವಾಗಿದೆ
ನಗರದ ಹಲವು ಕಡೆಗಳಲ್ಲಿ ಧಾರಾಕಾರ ಮಳೆ ಅಬ್ಬರಿಸಿದ್ದರಿಂದ ವಾಹನ ಸವಾರರು, ವಿದ್ಯಾರ್ಥಿಗಳ ತೀವ್ರ ಪರದಾಟ ನಡೆಸಿದ್ದರು. ಗುಡುಗು ಸಹಿತ ಭಾರೀ ಮಳೆಗೆ ರಸ್ತೆಯ ಮೇಲೆ ನೀರು ನಿಂತು ಅವಾಂತರ ಸೃಷ್ಟಿಯಾಯಿತು.
PublicNext
05/05/2026 09:18 pm
LOADING...