ಉಡುಪಿ: ನಾಗಮಂಡಲ ಸೇವೆಯು ಕೇವಲ ಒಂದು ಆಚರಣೆಯಲ್ಲ, ಅದು ಭಕ್ತಿ, ಆತ್ಮಶುದ್ಧಿ ಮತ್ತು ಪ್ರಕೃತಿಯೊಂದಿಗೆ ಮಾನವನ ಬಾಂಧವ್ಯವನ್ನು ಪ್ರತಿಬಿಂಬಿಸುವ ಪವಿತ್ರ ಆರಾಧನೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸೇವೆಯಲ್ಲಿ ಕಾಂಕ್ರೀಟೀಕರಣ, ಅತಿಯಾದ ಆಡಂಬರ ಮತ್ತು ವಾಣಿಜ್ಯೀಕರಣ ಹೆಚ್ಚಾಗುತ್ತಿರುವ ಬಗ್ಗೆ ಆತಂಕಗಳು ವ್ಯಕ್ತವಾಗುತ್ತಿವೆ. ನಾಗಕನ್ನಿಕೆಯಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರು ಈ ಕುರಿತು ಮಾತನಾಡುತ್ತಾ, "ನಾಗಮಂಡಲ ಸೇವೆಯನ್ನು ಆತ್ಮಶುದ್ಧಿಯಿಂದ ಮತ್ತು ಸಂಪ್ರದಾಯಬದ್ಧವಾಗಿ ನಡೆಸಬೇಕು. ಆದರೆ ಇಂದು ಮೂಲ ಪೂಜಾ ವಿಧಾನಗಳಿಗಿಂತ ಆಡಂಬರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಕಾಂಕ್ರೀಟ್ ವೇದಿಕೆಗಳು ಮತ್ತು ಆಧುನಿಕ ವ್ಯವಸ್ಥೆಗಳ ನಡುವೆ ನಾಗಾರಾಧನೆಯ ನೈಜ ಸ್ವರೂಪ ಕಣ್ಮರೆಯಾಗುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರ ಪ್ರಕಾರ, ನಾಗಮಂಡಲ ಸೇವೆಯ ಹಿಂದಿರುವ ಆಧ್ಯಾತ್ಮಿಕತೆ, ಪ್ರಕೃತಿಯೊಂದಿಗಿನ ನಂಟು ಹಾಗೂ ಸಂಪ್ರದಾಯಬದ್ಧ ಆಚರಣೆಗಳು ಉಳಿಯಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಈ ವಿಶಿಷ್ಟ ಸಂಸ್ಕೃತಿಯ ನಿಜವಾದ ಅರ್ಥ ತಿಳಿಯದೆ ಹೋಗುವ ಅಪಾಯವಿದೆ.
ಈ ಕುರಿತು ಅವರ ಸಂಪೂರ್ಣ ಅಭಿಪ್ರಾಯ ಮತ್ತು ವಿಶೇಷ ಸಂಭಾಷಣೆ ಶೀಘ್ರದಲ್ಲೇ ಪ್ರಸಾರವಾಗಲಿದೆ.
PublicNext
09/06/2026 06:55 pm
LOADING...