ಬಾಗಲಕೋಟೆ : ಸಿಎಂ ಡಿಕೆಶಿ ನೇತೃತ್ವದ ಸಂಪುಟ ಸೇರಲು ಶಾಸಕರು ಲಾಭಿ ಜೋರಾದ ಹಿನ್ನೆಲೆ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ಮಹಾಲಿಂಗಪುರ ಪಟ್ಟಣದಲ್ಲಿ ಜಮೀರ್ ಫೋಟೋ ಹಿಡಿದು ಪ್ರತಿಭಟನೆ ಮಾಡಿದ ಅಭಿಮಾನಿಗಳು, ಜಮೀರ್ ಅವರಿಗೆ ತಕ್ಷಣವೇ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.
ಮಹಮ್ಮದೀಯಾ ಅಂಜುಮನ್ ಕಮಿಟಿ ಹಾಗೂ ಮಹಾಲಿಂಗಪುರ, ಸುತ್ತಮುತ್ತಲಿನ ಮುಸ್ಲಿಮ್ ಸಮುದಾಯದ ವತಿಯಿಂದ ಪ್ರೊಟೆಸ್ಟ್ ನಡೆಸಿದ್ದಾರೆ.
PublicNext
11/06/2026 09:44 pm
LOADING...