ಬೆಂಗಳೂರು: ಹೊರ ರಾಜ್ಯದವರನ್ನು ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ.ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 3 ಕೆಜಿ 610 ಗ್ರಾಂ ಗಾಂಜಾ ಸೀಜ್ ಮಾಡಿದ್ದಾರೆ.
ಆರೋಪಿಗಳು ದೇವನಹಳ್ಳಿ ತಾಲ್ಲೂಕಿನ ಪೋಲನಹಳ್ಳಿ KIADB ಪ್ರದೇಶದ ಎಕ್ಸೈಡ್ ಫ್ಯಾಕ್ಟರಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು.ಸಮೀರ್(30), ಪ್ರಜ್ವಲ್(19) ಬಂಧಿತ ಆರೋಪಿಗಳು.ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.ದೊಡ್ಡಬಳ್ಳಾಪುರ Dysp ಪಾಂಡುರಂಗ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು,ಆರಕ್ಷಕ ನಿರೀಕ್ಷಕರು ಪ್ರಕಾಶ್, ಕ್ರೈಂ ಸಿಬ್ಬಂದಿ ASI ನಾರಾಯಣಸ್ವಾಮಿ, ಜೈ ಭೀಮ್, ಸಂಜು ವಾಲೇಕರ್, ಶ್ರೀಧರ್ ಕುದುರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
PublicNext
19/06/2026 08:52 am
LOADING...