ಗದಗ: ಬಾಂಬೆ ಮಟಕಾ (ಓಸಿ ಜೂಜಾಟ) ನಡೆಸುತ್ತಿದ್ದ, 18 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ 08 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದರೂ ಚಟುವಟಿಕೆ ಮುಂದುವರಿಸಿದ್ದ ನಗರದ ರೌಡಿಶೀಟರ್ ರಾಜನಸಾ ಮಿಸ್ಕಿನ ನನ್ನು ಕಾನೂನು ಕ್ರಮದಡಿ ಗದಗ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಗದಗ ಎಸ್ಪಿ ರೋಹನ್ ಜಗದೀಶ್ ಅವರು, ಜೂಜಾಟ ಸೇರಿದಂತೆ ಸಮಾಜವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಗದಗ ಜಿಲ್ಲಾ ಪೊಲೀಸ್ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
Kshetra Samachara
20/07/2026 11:59 am
LOADING...