ಬೆಂಗಳೂರು: ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಭಾಗವಾಗಿ ಅಧಿಕಾರಿಗಳ ಜೊತೆ ಕೃಷ್ಣ ಬೈರೇಗೌಡ ಇವತ್ತು ಸಭೆ ಮಾಡಿದ್ರು. ಸಭೆಯಲ್ಲಿ ಕೆಲವು ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇನ್ಮುಂದೆ ನೋಂದಣಿಯಾಗದ ವಾಹನಗಳಲ್ಲಿ ಕಸ ರವಾನಿಸುವಂತಿಲ್ಲ ಅಂತ ಹೇಳಿದ್ದಾರೆ.
ನೋಂದಣಿಯಾಗದ ವಾಹನಗಳಲ್ಲಿ ಕಸ ರವಾನಿಸುವವರು ರಾತ್ರೋರಾತ್ರಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ಈ ಬಗ್ಗೆ ಜಿಬಿಎ ಅಧಿಕಾರಿಗಳು ಪೊಲೀಸರ ಜೊತೆ ಸೇರಿ ಕೆಲಸ ಮಾಡಬೇಕಿದೆ. ಇನ್ಮುಂದೆ ನೋಂದಣಿಯಾಗದ ವಾಹನಗಳಲ್ಲಿ ಕಸ ರವಾನಿಸುವಂತಿಲ್ಲ. ಅಲ್ಲದೆ, ಕಸ ಸಾಗಿಸುವ ಪ್ರತಿಯೊಂದೂ ವಾಹನಗಳಲ್ಲಿ ಜಿಪಿಎಸ್ ಅಳವಡಿಸುವುದು ಕಡ್ಡಾಯ ಅಂತ ತಿಳಿಸಿದ್ದಾರೆ.
PublicNext
30/07/2026 02:31 pm
LOADING...