ಶಾಸಕ ಶರತ್ ಬಚ್ಚೇಗೌಡ ಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಶಾಸಕ ಶರತ್ ಬಚ್ಚೇಗೌಡ ಬೇಸರ ಹೊರಹಾಕಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಕಿಯೋನಿಕ್ಸ್ ನಿಗಮ ಮಂಡಳಿ ಬೇಡ ಬೇರೆಯವರಿಗೆ ಅವಕಾಶ ಮಾಡಿಕೊಡಿ ಅಂತ ಶರತ್ ಬೇಸರ ಹೊರಹಾಕಿದ್ದಾರೆ. ನಿಗಮ ಮಂಡಳಿಯ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ಒಡಾಟ ನಡೆಸ್ತಿದ್ದು,ನಾನು 2.5 ತಿಂಗಳಿಂದ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದೆ. ಆದ್ರೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ ಸಹಜವಾಗೆ ನನಗೂ ಬೇಸರವಾಗಿದೆ. ಬೇಸರವಾಗಿದೆ ಅಷ್ಟೆ ಆದ್ರೆ ಅಸಮಧಾನವಿಲ್ಲ. ಮೂರು ವರ್ಷ ಸರ್ಕಾರದಲ್ಲಿ ನಾನು ಶಾಸಕನಾಗಿ ಕೆಲಸ ಮಾಡಿದ್ದೀನಿ ಸಾಕು. ಸಿಎಂ ನಿಗಮ ಮಂಡಳಿ ರಿಶಪಲ್ ಮಾಡ್ತೀನಿ ಅಂತ ಹೇಳಿದ್ದಾರೆ. ಅವರು ರೀ ಶಪಲ್ ಮಾಡಲಿ ಹೊಸಬರಿಗೆ ಅವಕಾಶ ಮಾಡಿಕೊಡಲಿ. ಬೇರೆ ಬೇರೆಯವರಿಗೆ ಅವಕಾಶ ಕೊಡಲಿ ಅಧಿಕಾರ ಯಾರೋಬ್ಬರ ಸ್ವತ್ತಲ್ಲ. ನಿಗಮ ಮಂಡಳಿ ಬೇಕು ಅಂತಲು ಹೇಳಲ್ಲ ಬೇಡ ಅಂತಲು ಹೇಳಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಅಸಮಾಧಾನ ಹೊರಹಾಕಿದ್ದಾರೆ.
PublicNext
05/08/2026 05:22 pm
LOADING...