ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ:ಸರ್ಕಾರಿ ಜಮೀನು ಸದ್ಬಳಕೆಗೆ ಹೊಸ ಯೋಜನೆ; ರೈತರ ಬದುಕಿಗೆ ತೇಗದ ಸಿರಿ

ಶಿವಮೊಗ್ಗ :ರಾಜ್ಯದ ಜನರ ಆರ್ಥಿಕ ಸಬಲೀಕರಣ ಹಾಗೂ ಸರ್ಕಾರಿ ಜಮೀನಿನ ಸದ್ಬಳಕೆಯ ಉದ್ದೇಶದಿಂದ ಸರ್ಕಾರವು ವಿನೂತನ 'ತೇಗದ ಸಿರಿ' ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತೀರ್ಥಹಳ್ಳಿ ಯಲ್ಲಿ ಮಾತನಾಡಿದ ಅವರು,

​ಈ ಯೋಜನೆಯ ಮುಖ್ಯ ಲಕ್ಷಣವೆಂದರೆ ಸರ್ಕಾರದ ಬಳಿ ಇರುವ ಖಾಲಿ ಹಾಗೂ ಬಳಕೆಯಾಗದ ಭೂಮಿಯಲ್ಲಿ ಮೌಲ್ಯಯುತವಾದ ತೇಗದ ಗಿಡಗಳನ್ನು ಬೆಳೆಸಲಾಗುತ್ತದೆ. ಈ ಗಿಡಗಳನ್ನು ಪೋಷಿಸಿ ಬೆಳೆಸುವ ರೈತರು ಹಾಗೂ ಭಾಗವಹಿಸುವ ಸಾರ್ವಜನಿಕರಿಗೆ ಹೆಚ್ಚಿನ ಆರ್ಥಿಕ ನೆರವು ಸಿಗುವಂತೆ ಯೋಜನೆ ರೂಪಿಸಲಾಗಿದೆ ಎಂದರು‌.

​ಶೇ.70 ರಷ್ಟು ಪಾಲು ತೇಗ ಬೆಳೆದು ಪೋಷಿಸುವ ಫಲಾನುಭವಿಗಳಿಗೆ.

​ಶೇ. 30 ಪಾಲು ರಾಜ್ಯ ಸರ್ಕಾರಕ್ಕೆ ಸಿಗಲಿದೆ.ಗ್ರಾಮೀಣ ಪ್ರದೇಶದ ಜನರಿಗೆ ದೀರ್ಘಾವಧಿಯ ಆರ್ಥಿಕ ಭದ್ರತೆ ನೀಡುವುದು ನಮ್ಮ ಆಶಯ. ಈ ಯೋಜನೆಯ ಮೂಲಕ ಸಾರ್ವಜನಿಕ ಆಸ್ತಿಗೆ ಮೌಲ್ಯವರ್ಧನೆ ಸಿಗುವುದರ ಜೊತೆಗೆ, ರೈತರ ಕೈಗೆ ಹೆಚ್ಚಿನ ಲಾಭಾಂಶ ತಲುಪಿ ಅವರ ಆರ್ಥಿಕ ಮಟ್ಟ ಸುಧಾರಿಸಲಿದೆ ಎಂದರು.

Edited By : Vinayak Patil
PublicNext

PublicNext

19/09/2026 07:57 pm

Cinque Terre

5.58 K

Cinque Terre

0

ಸಂಬಂಧಿತ ಸುದ್ದಿ