", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/52563-1750665146-WhatsApp-Image-2025-06-23-at-11.59.22-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UpparChikkodi" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕೋಡಿ : ತಾಲ್ಲೂಕಿನ ಮಜಲಟ್ಟಿ ಗ್ರಾಮದ ಕಲೇಶ್ವರ ಅಲ್ಲಮಪ್ರಭು ಮಂದಿರದ ಪೀಠಾಧಿಕಾರಿ ಬಸವಪ್ರಭು ಮಹಾರಾಜರು (76) ಭಾನುವಾರ ಲಿಂಗೈಕ್ಯರಾದರು. ಮ...Read more" } ", "keywords": "Basavaprabhu Maharaj passes away, Majalatti spiritual leader, Basavaprabhu Maharaj demise, Spiritual guru Basavaprabhu Maharaj, Majalatti condolences", "url": "https://dashboard.publicnext.com/node" } ಮಜಲಟ್ಟಿಯ ಬಸವಪ್ರಭು ಮಹಾರಾಜರು ಲಿಂಗೈಕ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಜಲಟ್ಟಿಯ ಬಸವಪ್ರಭು ಮಹಾರಾಜರು ಲಿಂಗೈಕ್ಯ

ಚಿಕ್ಕೋಡಿ : ತಾಲ್ಲೂಕಿನ ಮಜಲಟ್ಟಿ ಗ್ರಾಮದ ಕಲೇಶ್ವರ ಅಲ್ಲಮಪ್ರಭು ಮಂದಿರದ ಪೀಠಾಧಿಕಾರಿ ಬಸವಪ್ರಭು ಮಹಾರಾಜರು (76) ಭಾನುವಾರ ಲಿಂಗೈಕ್ಯರಾದರು. ಮಜಲಟ್ಟಿ ಹಾಗೂ ಚಿಂಚಣಿಯಲ್ಲಿ ಶಾಖಾ ಮಠಗಳನ್ನು ಹೊಂದಿದ್ದ ಬಸವಪ್ರಭು ಮಹಾರಾಜರು ಕಳೆದ 45 ವರ್ಷಗಳಿಂದ ಕಲ್ಲೇಶ್ವರ ಅಲ್ಲಮಪ್ರಭು ಸಂಪ್ರದಾಯದಲ್ಲಿ ಆಧ್ಯಾತ್ಮಿಕ ಪಾರಮಾರ್ಥಿಕ ಪರಂಪರೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಪ್ರವಚನ ಹೇಳುವ ಮೂಲಕ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದರು.

ಬಸವಪ್ರಭು ಮಹಾರಾಜರಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಅಪಾರ ಸಂಖ್ಯೆಯ ಭಕ್ತವೃಂದ ಹೊಂದಿದ್ದಾರೆ.ಕಳೆದ ನಾಲ್ಕೂವರೆ ದಶಕಗಳಿಂದ ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಯಂದು ಸತ್ಸಂಗ ಕಾರ್ಯಕ್ರಮ ಹಮ್ಮಿಕೊಂಡು ಜೀವನದಲ್ಲಿ ಮುಕ್ತಿ ಪಡೆಯುವ ಬಗೆಯನ್ನು ಬೋಧಿಸಿ ಮನೆ ಮಾತಾಗಿದ್ದರು.

ಬಸವಪ್ರಭು ಮಹಾರಾಜರ ಪಾರ್ಥಿವ ಶರೀರವನ್ನು ತಾಲ್ಲೂಕಿನ ಚಿಂಚಣಿ ಹಾಗೂ ಸ್ವಗ್ರಾಮ ಮಜಲಟ್ಟಿಯಲ್ಲಿ ವಾದ್ಯಮೇಳದ ತಂಡದವರು ಭಜನೆ ಮಾಡುವ ಮೂಲಕ ಮೆರವಣಿಗೆ ಮಾಡಲಾಯಿತು.ಮಜಲಟ್ಟಿ, ಚಿಂಚಣಿ, ಚಿಕ್ಕೋಡಿ, ನಿಪ್ಪಾಣಿ, ಮುಗಳಿ, ಜೈನಾಪುರ, ವಡ್ರಾಳ ಧುಳಗನವಾಡಿ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮದ ಭಕ್ತರು ಬಸವಪ್ರಭು ಮಹಾರಾಜರ ಅಂತಿಮ ದರ್ಶನ ಪಡೆದುಕೊಂಡರು.

ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ, ಸದಲಗಾದ ಶ್ರದ್ಧಾನಂದ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಸಿಗರೂರಿನ ಅಭಿನವ ಕಲ್ಲೇಶ್ವರ ಮಹಾರಾಜರು, ಆಡಿಯ ಸಿದ್ದೇಶ್ವರ ಸ್ವಾಮೀಜಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಸ್ಥಳೀಯ ಮುಖಂಡರಾದ ರುದ್ರಪ್ಪ ಸಂಗಪ್ಪಗೋಳ, ಮಹೇಶ ಭಾತೆ ಮುಂತಾದವರು ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

23/06/2025 01:22 pm

Cinque Terre

6.56 K

Cinque Terre

0

ಸಂಬಂಧಿತ ಸುದ್ದಿ