", "articleSection": "Politics,Business", "image": { "@type": "ImageObject", "url": "https://prod.cdn.publicnext.com/s3fs-public/52563-1750926187-_(1280-x-720-px)-(22).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ತುರ್ತು ಪರಿಸ್ಥಿತಿಯ 50ನೇ ವರ್ಷದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಮತ್ತು ಪ್ರದಾನಿ ಮೋದಿ ಆಡಳಿತದ ಬಗ್ಗೆ ...Read more" } ", "keywords": "Emergency 50th anniversary, Sagarika Ghose tweet, Mohanadas Pai response, Indian Emergency, Sagarika Ghose Mohanadas Pai exchange", "url": "https://dashboard.publicnext.com/node" }
ಬೆಂಗಳೂರು : ತುರ್ತು ಪರಿಸ್ಥಿತಿಯ 50ನೇ ವರ್ಷದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಮತ್ತು ಪ್ರದಾನಿ ಮೋದಿ ಆಡಳಿತದ ಬಗ್ಗೆ ಪತ್ರಕರ್ತೆ ಹಾಗೂ ತಿನಾಮುಲ್ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಅವರು ಮಾಡಿರುವ ಟ್ವೀಟ್ ಭಾರಿ ಚರ್ಚೆಯಾಗುತ್ತಿದೆ.
ಹೌದು ಬಿಜೆಪಿ ಮತ್ತು RSS ಸಂಘಟನೆಯನ್ನು ಟೀಕಿಸಿದ ಪತ್ರಕರ್ತೆ ಸಾಗರಿಕಾ ಘೋಷ್ ಮಾಡಿರುವ ಟ್ವೀಟ್ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಗರಿಕಾ ಘೋಷ್ ಟ್ವೀಟ್ನಲ್ಲಿ, ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆಯನ್ನು ಟೀಕಿಸುತ್ತಾ, 9 ವರ್ಷಗಳಲ್ಲಿ 9 ಸರ್ಕಾರಗಳನ್ನು ಉರುಳಿಸಿರುವುದು, ಮಾಧ್ಯಮಗಳನ್ನು ನಿಯಂತ್ರಿಸುವುದು, ವಿರೋಧ ಪಕ್ಷದವರನ್ನು ಹಿಂಸಿಸುವುದು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಮುಂತಾದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಅಂಶಗಳನ್ನು ತುರ್ತು ಪರಿಸ್ಥಿತಿ ಎಂದು ಗುರುತಿಸಲಾಗಿದೆ. ಎಂದಿದ್ದಾರೆ.
ಸಾಗರಿಕಾ ಘೋಷ್ ಅವರ ಟ್ವೀಟ್ನಲ್ಲಿನ ಮುಖ್ಯ ಅಂಶಗಳು:
ಸರ್ಕಾರಗಳನ್ನು ಉರುಳಿಸುವುದು:
ಕಳೆದ 9 ವರ್ಷಗಳಲ್ಲಿ 9 ಸರ್ಕಾರಗಳನ್ನು ಉರುಳಿಸಿದ ಆರೋಪವಿದೆ.
ಮಾಧ್ಯಮಗಳ ನಿಯಂತ್ರಣ:
ಮಾಧ್ಯಮಗಳನ್ನು ಸೆರೆಹಿಡಿಯುವುದು ಮತ್ತು ಪತ್ರಕರ್ತರನ್ನು ಕೈಗೊಂಬೆಗಳನ್ನಾಗಿ ಮಾಡುವುದು.
ರಾಜ್ಯಗಳ ಹಣವನ್ನು ವಂಚಿಸುವುದು:
ವಿರೋಧ ಪಕ್ಷದ ಆಳ್ವಿಕೆಯ ರಾಜ್ಯಗಳಿಂದ ಹಣವನ್ನು ವಂಚಿಸುವುದು.
ವಿರೋಧ ಪಕ್ಷದವರ ಬೇಟೆ:
ವಿರೋಧ ಪಕ್ಷದವರನ್ನು ಬೇಟೆಯಾಡಲು ಏಜೆನ್ಸಿಗಳನ್ನು ಸಜ್ಜುಗೊಳಿಸುವುದು.
ಭಿನ್ನಮತೀಯರ ಗುರಿಯಾಗಿಸುವುದು:
ಭಿನ್ನಮತೀಯರನ್ನು ಗುರಿಯಾಗಿಸಲು ಆನ್ಲೈನ್ನಲ್ಲಿ ದುಷ್ಟ ಸೈನ್ಯವನ್ನು ಪೋಷಿಸುವುದು.
ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ:
ಹೊರಗುತ್ತಿಗೆ ಜಾಗೃತ ದಳದ ಮೂಲಕ ಅಲ್ಪಸಂಖ್ಯಾತರನ್ನು ಹಿಂಸಿಸುವುದು.
ತುರ್ತು ಪರಿಸ್ಥಿತಿ:
ಈ ಎಲ್ಲ ಚಟುವಟಿಕೆಗಳನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಲಾಗಿದೆ.
ಇದು ಗರಿಷ್ಠ ವಂಚನೆ ಮತ್ತು ಗರಿಷ್ಠ ಬೆದರಿಕೆ ಎಂದು ಘೋಷ್ ಹೇಳಿದ್ದಾರೆ.
ಸದ್ಯ ಈ ಟ್ವೀಟ್ಗೆ ಟಾಂಗ್ ಕೊಟ್ಟ ಇನ್ಫೋಸಿಸ್ನ ಮಾಜಿ ಸಿಎಫ್ಒ ತಾಂತ್ರಿಕ ಹೂಡಿಕೆದಾರ, ಆರಿನ್ ಕ್ಯಾಪಿಟಲ್ನ ಮುಖ್ಯಸ್ಥ ಮೋಹನದಾಸ್ ಪೈ ಇದು ಹಾಸ್ಯಾಸ್ಪದ ಮತ್ತು ಮೂರ್ಖತನ. ನಾನು ತುರ್ತು ಪರಿಸ್ಥಿತಿಯ ಮೂಲಕ ಬದುಕಿದ್ದೇನೆ - ನಾವು ಬದುಕಿದ ಭಯ, ಬಂಧನಗಳು, ಅನಿಯಂತ್ರಿತ ನಿರ್ಧಾರಗಳು, ಅಧಿಕಾರದ ದುರುಪಯೋಗ, ನ್ಯಾಯಾಂಗ ಮತ್ತು ಮಾಧ್ಯಮದ ಮೇಲಿನ ದಾಳಿ. ಅದು ದಬ್ಬಾಳಿಕೆಯಾಗಿತ್ತು.
ಇಂದು ನಾವು ಮುಕ್ತ ಮಾಧ್ಯಮ, ಮುಕ್ತ ಸಮಾಜ, ಅತಿ ಕ್ರಿಯಾಶೀಲ ನ್ಯಾಯಾಂಗವನ್ನು ಹೊಂದಿದ್ದೇವೆ. ತುರ್ತು ಪರಿಸ್ಥಿತಿಯ ಭೀಕರತೆಯನ್ನು ಮುಚ್ಚಿಡುವ ಈ ವಿಕೃತ ಮನಸ್ಸುಗಳನ್ನು ಬಹಿರಂಗಪಡಿಸಬೇಕಾಗಿದೆ. ಭಾರತದಲ್ಲಿ ಮತ್ತೆಂದೂ ತುರ್ತು ಪರಿಸ್ಥಿತಿ ಬರಬಾರದು ಎಂದು ಟಾಂಟ್ ಕೊಟ್ಟಿದ್ದಾರೆ.
PublicNext
26/06/2025 01:54 pm