", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1750954087-dg.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಶಾಸಕ ಸಿ.ಸಿ.ಪಾಟೀಲ ಅವರು ಕಾಂಗ್ರೆಸ್ ಪಕ್ಷದ ಆಂತರಿಕ ಸ್ಥಿತಿಗತಿಗಳನ್ನು ತರಾಟೆಗೆ ತೆಗೆದುಕೊಂಡು ತೀಕ್ಷ್ಣವಾಗಿ ಟೀಕೆ ಮಾಡಿದ್ದಾರೆ. ...Read more" } ", "keywords": "Gadag Congress criticism, CC Patil controversy, Congress party internal issues, CC Patil statement, Gadag political news, Congress three-door house comment.", "url": "https://dashboard.publicnext.com/node" }
ಗದಗ: ಶಾಸಕ ಸಿ.ಸಿ.ಪಾಟೀಲ ಅವರು ಕಾಂಗ್ರೆಸ್ ಪಕ್ಷದ ಆಂತರಿಕ ಸ್ಥಿತಿಗತಿಗಳನ್ನು ತರಾಟೆಗೆ ತೆಗೆದುಕೊಂಡು ತೀಕ್ಷ್ಣವಾಗಿ ಟೀಕೆ ಮಾಡಿದ್ದಾರೆ.
"ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುತ್ತಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷ ಹಲವು ಯಶಸ್ವಿ ಹೋರಾಟಗಳನ್ನು ನಡೆಸಿದೆ. ಮುಂದುವರಿದರೆ ಸಂತೋಷ, ಯಶಸ್ಸು ಕಂಟಿನ್ಯೂ ಆಗಲಿ ಎಂದು ಹಾರೈಸುತ್ತೇನೆ ಎಂದರು.
ಬಳಿಕ ಮಾತು ತಿರುಚಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಪಾಟೀಲ ಅವರು, "ಕಾಂಗ್ರೆಸ್ ಈಗ ಮನೆಯೊಂದು ಮೂರು ಬಾಗಿಲು ಆದಂತಾಗಿದೆ. ಒಡೆದ ಮನೆ ಅನ್ನೋದಕ್ಕೆ ಕಣ್ಣಿಗೇ ಸಾಕು, ಕನ್ನಡಿ ಬೇಕಾಗಿಲ್ಲ, ಎಂದು ವ್ಯಂಗ್ಯವಾಡಿದರು.
"ಕಾಂಗ್ರೆಸ್ ಪಾರ್ಟಿಯ ಪರಿಸ್ಥಿತಿ ಟಿವಿಯ ಪಿಕ್ಚರ್ ಶೈಲಿಯಂತಿದೆ. ಮೇಲೆ ಒಂದು ದೃಶ್ಯ, ಕೆಳಗೆ ಇನ್ನೊಂದು ದೃಶ್ಯ. ಹಿರಿಯ ನಾಯಕರೇ ಪರಸ್ಪರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಒಬ್ಬರು ಭ್ರಷ್ಟಾಚಾರವಿದೆ ಎನ್ನುತ್ತಾರೆ, ಇನ್ನೊಬ್ಬರು ಅದನ್ನು ಸಮರ್ಥಿಸುತ್ತಾರೆ. ಇನ್ನೊಬ್ಬರು ಎರಡು ವರ್ಷಗಳಲ್ಲಿ ಚರಂಡಿ ಕಟ್ಟಿಲ್ಲ, ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಹೊರೆ ಹಾಕುತ್ತಿದ್ದಾರೆ. ಇದು ಪಕ್ಷದ ಗಂಭೀರ ವಿಕೃತ ಸ್ಥಿತಿ ಎಂದು ಕಿಡಿಕಾರಿದರು.
PublicNext
26/06/2025 09:38 pm