", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/39640520250627035722filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ದೇಹದ ಸದೃಢತೆ, ಸುಭದ್ರತೆಯಿಂದ ಕಾಪಾಡಿಕೊಳ್ಳಲು  ಅಲ್ಕೋಹಾಲ್, ಬೀಡಿ, ಸಿಗರೇಟ್, ಗುಟ್ಕಾ, ಅಪೀಮು, ಗಾಂಜಾದಂತಹ ಮತ್ತುಭರಿಸುವ ಮಾದಕ...Read more" } ", "keywords": "Node", "url": "https://dashboard.publicnext.com/node" } ಚಾಮರಾಜನಗರ : ದೇಹದ ಸದೃಢತೆ, ಸುಭದ್ರತೆಗೆ ಮಾದಕ ಪದಾರ್ಥಗಳನ್ನು ತ್ಯಜಿಸಲು ಎಸ್ಪಿ ಡಾ. ಬಿ.ಟಿ.ಕವಿತಾ ಸಲಹೆ  
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ದೇಹದ ಸದೃಢತೆ, ಸುಭದ್ರತೆಗೆ ಮಾದಕ ಪದಾರ್ಥಗಳನ್ನು ತ್ಯಜಿಸಲು ಎಸ್ಪಿ ಡಾ. ಬಿ.ಟಿ.ಕವಿತಾ ಸಲಹೆ  

ಚಾಮರಾಜನಗರ : ದೇಹದ ಸದೃಢತೆ, ಸುಭದ್ರತೆಯಿಂದ ಕಾಪಾಡಿಕೊಳ್ಳಲು  ಅಲ್ಕೋಹಾಲ್, ಬೀಡಿ, ಸಿಗರೇಟ್, ಗುಟ್ಕಾ, ಅಪೀಮು, ಗಾಂಜಾದಂತಹ ಮತ್ತುಭರಿಸುವ ಮಾದಕ ಪದಾರ್ಥಗಳನ್ನು ಇಂದೇ ತ್ಯಜಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಸಲಹೆ ಮಾಡಿದರು. 

ನಗರದ ಹೊರವಲಯದಲ್ಲಿರುವ ಯಡಬೆಟ್ಟದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಉಪನ್ಯಾಸ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಸಿಇಎನ್ ಅಪರಾಧ ಪೊಲೀಸ್ ಠಾಣೆ ಹಾಗೂ ಸಿಮ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಅಂತರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಮಲು ಭರಿಸುವ ಮಾದಕ ಪದಾರ್ಥಗಳ ದುಷ್ಪರಿಣಾಮಗಳನ್ನು ಮನಗಂಡು ಅವುಗಳ ಚಟಕ್ಕೆ ಬಲಿಯಾಗದೇ ಅವುಗಳಿಂದ ದೂರವಿರಲು ವಿದ್ಯಾರ್ಥಿಗಳು, ಯುವಕ, ಯುವತಿಯರು, ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ತಂದೆ-ತಾಯಿ, ಸ್ನೇಹಿತರು, ಬಂಧು ಬಳಗ, ಆಪ್ತವರ್ಗ ನಮ್ಮಿಂದ ದೂರವಾದರೂ ಕೊನೆ ಉಸಿರಿರುವವರೆಗೂ ನಮ್ಮೊಂದಿಗಿರುವ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಉತ್ತಮ ಜೀವನ ಕಟ್ಟಿಕೊಂಡು ಸಮಾಜಕ್ಕೆ ನಮ್ಮಿಂದಾದ ಕೊಡುಗೆ ನೀಡಬೇಕು. ಆಗಮಾತ್ರ ಮಾನವ ಬದುಕು ಸಾರ್ಥಕವಾಗಲಿದೆ ಎಂದರು. 

ದೈನಂದಿನ ಜೀವನದಲ್ಲಿ ಹೊಸಹೊಸ ಆವಿಷ್ಕಾರ ಮಾಡುವ ಹಂಬಲ, ತುಡಿತ ಯುವಕರಿಗೆ ಇರುತ್ತದೆ. ಈ ಹಾದಿಯಲ್ಲಿ ಸಹವರ್ತಿಗಳ ಒತ್ತಡದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮಾದಕ ವಸ್ತುಗಳ ಸೇವನೆಗೆ ತೊಡಗಿಸಿಕೊಂಡು ಅದನ್ನೇ ಹವ್ಯಾಸವಾಗಿ ಪರಿವರ್ತಿಸಿಕೊಳ್ಳುವ ಪರಿಪಾಠ ನಮ್ಮಲ್ಲಿ ಹೆಚ್ಚಾಗುತ್ತಿದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರೆ ಕ್ಷೇತ್ರದ ಯುವಜನತೆಯಲ್ಲಿಯೂ ಅದನ್ನು ಕಾಣಬಹುದಾಗಿದೆ. ಮಾದಕ ಪದಾರ್ಥಗಳನ್ನು ಈಗಿನಿಂದಲೇ ತ್ಯಜಿಸಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಸದೃಢ ದೇಹದ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೂ ಮುಂದಾಗಬೇಕು ಎಂದು ತಿಳಿಸಿದರು. 

Edited By : PublicNext Desk
Kshetra Samachara

Kshetra Samachara

27/06/2025 03:53 pm

Cinque Terre

940

Cinque Terre

0

ಸಂಬಂಧಿತ ಸುದ್ದಿ