", "articleSection": "Law and Order,Business,Government", "image": { "@type": "ImageObject", "url": "https://prod.cdn.publicnext.com/s3fs-public/405356-1751198596-hkhjkj.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಎನ್ನುವ ಹಾಗೆ ಟ್ರಾಫಿಕ್ ಜಾಮ್ ಸಮಸ್ಯೆ ತಪ್ಪಿಸಲು ಹೊಸಪೇಟೆ ಎಪಿಎಂಸಿ ಮುಖ್ಯ‌ಗೇಟ...Read more" } ", "keywords": "Business losses, main gate closure, protest warning, traders' demands, economic impact. ", "url": "https://dashboard.publicnext.com/node" } "ವಾರದಿಂದ ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿದ್ದೇವೆ" ಮುಖ್ಯ ಗೇಟ್ ತೆರೆಯದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ವ್ಯಾಪಾರಸ್ಥರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ವಾರದಿಂದ ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿದ್ದೇವೆ" ಮುಖ್ಯ ಗೇಟ್ ತೆರೆಯದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ವ್ಯಾಪಾರಸ್ಥರು

ಹೊಸಪೇಟೆ : ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಎನ್ನುವ ಹಾಗೆ ಟ್ರಾಫಿಕ್ ಜಾಮ್ ಸಮಸ್ಯೆ ತಪ್ಪಿಸಲು ಹೊಸಪೇಟೆ ಎಪಿಎಂಸಿ ಮುಖ್ಯ‌ಗೇಟ್ ಅನ್ನು ಅಧಿಕಾರಿಗಳು ಬಂದ್ ಮಾಡಿ ಎಡವಟ್ಟು ಮಾಡಿದ್ದಾರೆ. ಎಪಿಎಂಸಿ ಮುಖ್ಯ ಗೇಟ್ ಬಂದ್ ಮಾಡಿದ್ರಿಂದ ಜೀವ ಭಯ ಇಲ್ಲದೇ ವಿದ್ಯುತ್ ಸಿಟಿ ಗೋಡೆ ಏರೋದು, ಅಲ್ಲಿಂದ ಕೆಳಗೆ ಜಿಗಿದು ತರಕಾರಿ ಖರೀದಿಗೆ ಜನರು ಮುಂದಾಗ್ತಿದ್ದಾರೆ. ಟಿಬಿ ಡ್ಯಾಂ ಹೋಗುವ ರಸ್ತೆಯಲ್ಲಿರೋ ಎಪಿಎಂಸಿಯಲ್ಲಿ ಅವ್ಯವಸ್ಥೆ ಎದ್ದು ಕಾಣ್ತಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಎಡವಟ್ಟಿಗೆ ಹೊಸಪೇಟೆ ಜನ ಆಕ್ರೋಶ‌ ಹೊರಹಾಕ್ತಿದ್ದಾರೆ.

ಒಂದು ವಾರದಿಂದ‌ ವ್ಯಾಪಾರವಿಲ್ಲದೇ ನಷ್ಟ ಅನುಭವಿಸ್ತಿದ್ದೇವೆ. ಎರಡು ದಿನದಲ್ಲಿ ಗೇಟ್ ಒಪನ್ ಮಾಡದಿದ್ದರೇ ತರಕಾರಿ ಮಾರಾಟ ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಅಂತ ಎಪಿಎಂಸಿ ಅಧಿಕಾರಿಗಳಿಗೆ ತರಕಾರಿ ವ್ಯಾಪಾರಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ನೂ, ಹೊಸಪೇಟೆ ಎಪಿಎಂಸಿ ಸಂಡೂರು, ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ವ್ಯಾಪಾರಕ್ಕೆ ಅಂತ ಬರುವ ರೈತರು, ಖರೀದಿದಾರರು ವಾಹನಗಳನ್ನ ರಸ್ತೆ ಪಕ್ಕ ನಿಲ್ಲಿಸಿ ಹೋಗ್ತಾರೆ. ಹೀಗಾಗಿ ಟ್ರಾಫಿಕ್‌ ಜಾಮ್ ಸಮಸ್ಯೆ ಬಹಳಷ್ಟು ಆಗ್ತಾ ಇದೆ. ಇದಕ್ಕೆ ಸ್ಪಷ್ಟನೆ ಕೊಟ್ಟಿರೋ ಅಧಿಕಾರಿಗಳು ಟ್ರಾಫಿಕ್ ಸಮಸ್ಯೆ ತಪ್ಪಿಸಲು ನಾವೇ ಮುಖ್ಯ‌ಗೇಟ್ ಬಂದ್ ಮಾಡಿದ್ದೇವೆ. ಮೇಲಧಿಕಾರಿಗಳ ಜೊತೆ ಚರ್ಚಿಸಿ ಗೇಟ್ ತೆರೆಯಬೇಕು, ಬೇಡವೋ ಅಂತಾ ನಿರ್ಧಿಸ್ತಿವಿ ಅಂತ ಹೊಸಪೇಟೆ ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಹೇಳ್ತಿದ್ದಾರೆ.

ಪಾಂಡುರಂಗ ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ

Edited By : Shivu K
PublicNext

PublicNext

29/06/2025 10:38 am

Cinque Terre

45.3 K

Cinque Terre

0

ಸಂಬಂಧಿತ ಸುದ್ದಿ