ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಮೊಹರಂ ವೇಳೆ ರಸ್ತೆ ಮಧ್ಯೆ ಟ್ರಂಚ್ ಅಗೆತ- ಅರಣ್ಯ ಸಚಿವರ ಮನೆ ಎದುರು ಗ್ರಾಮಸ್ಥರ ಧರಣಿ ಎಚ್ಚರಿಕೆ

ಹೊಸಪೇಟೆ: ಹಿಂದೂ- ಮುಸ್ಲಿಮರ ಭಾವೈಕ್ಯತೆಯ ಸಂಕೇತದ ಮೊಹರಂ ಹಬ್ಬಕ್ಕೆ ಅರಣ್ಯ ಇಲಾಖೆ ಅಡ್ಡಿ ಮಾಡ್ತಿದೆ. ಹೀಗಂತ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗುಂಡಾ ಗ್ರಾಮದ ಜನ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಐತಿಹಾಸಿಕ ರಾಮನಮಲೈ ದಟ್ಟಾರಣ್ಯದಲ್ಲಿರೋ ರಾಮಲಿಸ್ವಾಮಿ ದೇಗುಲಕ್ಕೆ ಮೊಹರಂ ಪ್ರಯುಕ್ತ ಲಕ್ಷ, ಲಕ್ಷ ಭಕ್ತಾದಿಗಳು ಬರ್ತಾರೆ. ಮೊಹರಂ ಹತ್ತಿರ ಬರ್ತಿದ್ದಂತೆ ಅರಣ್ಯ ಅಧಿಕಾರಿಗಳು ಭಕ್ತರು ತೆರಳುವ ರಸ್ತೆ ಮಧ್ಯೆ ಟ್ರಂಚ್ ಅಗೆದು ವಿನಾಕಾರಣ ತೊಂದರೆ ಕೊಡ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಮೊಹರಂ ವೇಳೆ ಟ್ರಂಚ್ ಆಗೆದು ಹಾಕಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಟ್ರಂಚ್ ಮುಚ್ಚದೇ ಹೋದ್ರೆ ಅರಣ್ಯ ಸಚಿವರ ಮನೆ ಎದುರು ಧರಣಿ ಮಾಡ್ತೇವೆ ಅಂತಿದ್ದಾರೆ.

ಇದೇ ವಿಚಾರವಾಗಿ ಗುಂಡಾ ಗ್ರಾಮದ ಜನರನ್ನು ನಮ್ಮ ಪ್ರತಿನಿಧಿ ಪಾಂಡುರಂಗ ಜಂತ್ಲಿ ಮಾತನಾಡಿಸಿದ್ದಾರೆ. ಜನ ಏನು ಹೇಳಿದ್ದಾರೆ? ಬನ್ನಿ... ನೋಡೋಣ.

Edited By : Manjunath H D
PublicNext

PublicNext

29/06/2025 06:39 pm

Cinque Terre

16.8 K

Cinque Terre

1

ಸಂಬಂಧಿತ ಸುದ್ದಿ