", "articleSection": "Nature,Human Stories,Accident", "image": { "@type": "ImageObject", "url": "https://prod.cdn.publicnext.com/s3fs-public/229640-1751195460-saar.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JameelSagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಾಗರ: 50 ಅಡಿ ಆಳದ ಬಾವಿಗೆ ಬಿದ್ದಿದ್ದ ಹೋರಿಯನ್ನು ಜೀವಂತವಾಗಿ ರಕ್ಷಣೆ ಮಾಡುವಲ್ಲಿ ಸಾಗರ ಅಗ್ನಿಶಾಮಕ ತಂಡ ಯಶಸ್ವಿಯಾಗಿದೆ. ನಗರಸಭೆ ವ್ಯಾಪ...Read more" } ", "keywords": "Sagara fire rescue, fire brigade rescue operation, pig rescue from well, Sagara news, fire service bravery.", "url": "https://dashboard.publicnext.com/node" } ಸಾಗರ: ಅಗ್ನಿಶಾಮಕ ಸಿಬ್ಬಂದಿಯಿಂದ 50 ಅಡಿ ಆಳದ ಬಾವಿಗೆ ಬಿದ್ದ ಹೋರಿ ರಕ್ಷಣೆ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಅಗ್ನಿಶಾಮಕ ಸಿಬ್ಬಂದಿಯಿಂದ 50 ಅಡಿ ಆಳದ ಬಾವಿಗೆ ಬಿದ್ದ ಹೋರಿ ರಕ್ಷಣೆ!

ಸಾಗರ: 50 ಅಡಿ ಆಳದ ಬಾವಿಗೆ ಬಿದ್ದಿದ್ದ ಹೋರಿಯನ್ನು ಜೀವಂತವಾಗಿ ರಕ್ಷಣೆ ಮಾಡುವಲ್ಲಿ ಸಾಗರ ಅಗ್ನಿಶಾಮಕ ತಂಡ ಯಶಸ್ವಿಯಾಗಿದೆ.

ನಗರಸಭೆ ವ್ಯಾಪ್ತಿಯ ಲೋಹಿಯಾ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂಭಾಗದಲ್ಲಿ ರಿಂಗ್ ಹಾಕಿರುವ 50 ಅಡಿ ಆಳದ ಬಾವಿಗೆ ಅಕಸ್ಮಿಕವಾಗಿ ಹೋರಿ ಒಂದು ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಸ್ಥಳೀಯರು ತಕ್ಷಣ ಸಾಗರ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ರೂಪ ಹಾಗೂ ಇತರೆ ಸಾಮಗ್ರಿಗಳ ಸಹಾಯದಿಂದ ಬಾವಿಗೆ ಇಳಿದು ಹೋರಿಯನ್ನು ಜೀವಂತವಾಗಿ ರಕ್ಷಣೆ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ತೆರೆಯುವ ಬಾವಿ ಹಾಗೂ ಗುಂಡಿಗಳನ್ನು ಮುಚ್ಚದೆ ಇರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಮುಂದೆ ಇಂತಹ ಘಟನೆ ಆಗದಂತೆ ನಿಗಾ ವಹಿಸುವ ಜೊತೆಗೆ ಮಾಲೀಕರಿಗೆ ಎಚ್ಚರಿಕೆ ನೀಡಬೇಕು ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿ ವಿನಾಯಕ ಹೆಗ್ಗನಾಯಕ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ನಂದಕುಮಾರ ಎಂ, ರಾಜೇಂದ್ರ ಡಿ. ಬಿ, ಆನಂದ ವಡ್ಡರ, ಶಿವಕುಮಾರ ಡಿ, ರಾಜೇಂದ್ರಕುಮಾರ ಸಿ. ಜಿ, ವಿಶ್ವನಾಥ ರೆಡ್ಡಿ ಜಿ, ಸುನೀಲ ಮೋರೆ, ಹೆಚ್. ಟಿ ಭೀಮ್ ರಾಜ್ ಹಾಜರಿದ್ದರು.

ಜಮೀಲ್ ಸಾಗರ್ “ಪಬ್ಲಿಕ್ ನೆಕ್ಸ್ಟ್ ಸಾಗರ”

Edited By : Manjunath H D
PublicNext

PublicNext

29/06/2025 04:41 pm

Cinque Terre

17.2 K

Cinque Terre

2

ಸಂಬಂಧಿತ ಸುದ್ದಿ