", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1751247920-Untitled-design---2025-06-30T071814.549.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಲಕ್ನೋ: ಉತ್ತರ ಪ್ರದೇಶದಲ್ಲಿ 18 ಎಕರೆ ಆಸ್ತಿಗಾಗಿ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದ ಮಹಿಳೆ, ಕೆಲವೇ ದಿನಗಳಲ್ಲಿ ಆತನನ್ನು ಹತ್ಯೆ ಮಾಡಿರುವ ಘ...Read more" } ", "keywords": "- Teacher murdered over property dispute - Killer Beauty case - Property dispute leads to murder - Uttarpradesh crime news - Murder case investigation", "url": "https://dashboard.publicnext.com/node" } "ಆಸ್ತಿ ಹೆಸರಿನಲ್ಲಿ ಸಂಚು - ‘ಕಿಲ್ಲರ್ ಬ್ಯೂಟಿ’ ಕೈವಾಡದಿಂದ ಶಿಕ್ಷಕನ ದಾರುಣ ಅಂತ್ಯ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಆಸ್ತಿ ಹೆಸರಿನಲ್ಲಿ ಸಂಚು - ‘ಕಿಲ್ಲರ್ ಬ್ಯೂಟಿ’ ಕೈವಾಡದಿಂದ ಶಿಕ್ಷಕನ ದಾರುಣ ಅಂತ್ಯ!

ಲಕ್ನೋ: ಉತ್ತರ ಪ್ರದೇಶದಲ್ಲಿ 18 ಎಕರೆ ಆಸ್ತಿಗಾಗಿ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದ ಮಹಿಳೆ, ಕೆಲವೇ ದಿನಗಳಲ್ಲಿ ಆತನನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹತ್ಯೆಯಾದ ವ್ಯಕ್ತಿಯನ್ನು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಪಡ್ವಾರ್ (ಖಿಟೋಲಾ) ಗ್ರಾಮದ 45 ವರ್ಷದ ಇಂದ್ರಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ. ಹತ್ಯೆ ಆರೋಪಿಯನ್ನು ಸಾಹಿಬಾ ಬಾನೋ ಎಂದು ಗುರುತಿಸಲಾಗಿದೆ.

ಇಂದ್ರಕುಮಾರ್ ತಿವಾರಿ ಅರೆಕಾಲಿಕ ಶಿಕ್ಷಕ ಹಾಗೂ ರೈತನಾಗಿದ್ದ. ಕಳೆದ ತಿಂಗಳು ಪ್ರಸಿದ್ಧ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ ಮಹಾರಾಜ್ ಅವರ ಪ್ರವಚನ ಸಂದರ್ಭದಲ್ಲಿ ‘ವಿವಾಹವಾಗದಿರುವ ಹತಾಶೆ’ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಅವರು, “18 ಎಕರೆ ಭೂಮಿ ಇದೆ. ಆದರೆ ನೋಡಿಕೊಳ್ಳಲು ಯಾರೂ ಇಲ್ಲ ಎಂದು ಬೇಸರಪಟ್ಟಿದ್ದರು.

ಈ ವಿಡಿಯೋ ಗಮನಿಸಿದ ಸಾಹಿಬಾ ಬಾನೋ ಮತ್ತು ಆಕೆಯ ಸಹಚರರು ಆಸ್ತಿಗೆ ಆಸೆಪಟ್ಟು ಸಂಚು ರೂಪಿಸಿದರು. ಸಾಹಿಬಾ ನಕಲಿ ಆದಾರ್‌ ಕಾರ್ಡ್‌ ತಯಾರಿಸಿಕೊಂಡು, "ಕುಶಿ ತಿವಾರಿ' ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಇಂದ್ರಕುಮಾರ್ ಅವರನ್ನು ಸಂಪರ್ಕಿಸಿ, ಬಳಿಕ ಗೋರಖ್‌ಪುರಕ್ಕೆ ಕರೆಸಿ ಮದುವೆ ಪ್ರಸ್ತಾಪಿಸಿದ್ದರು. ಇಂದ್ರಕುಮಾರ್‌ ಒಪ್ಪಿಕೊಂಡು ಕುಟುಂಬಕ್ಕೂ ಈ ವಿಷಯವನ್ನು ತಿಳಿಸಿದ್ದ.

ಇಬ್ಬರೂ ಗೋರಖ್‌ಪುರದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇಂದ್ರಕುಮಾರ್ ಅವರ ಶವ ಕುಶಿನಗರದ ಹತಾ ಕೊತ್ವಾಲಿ ಪ್ರದೇಶದ ಸುಕರೌಲಿಯಲ್ಲಿ ಪತ್ತೆಯಾಗಿದೆ. ಶವದ ಕತ್ತಿಗೆ ಚಾಕು ಇರಿತಗಳಿದ್ದವು.

ಪ್ರಕರಣದ ಪ್ರಮುಖ ಆರೋಪಿ ಸಾಹಿಬಾ ಬಾನೋ ಇದೀಗ ಬಂಧಿತಳಾಗಿದ್ದು, ಆಕೆಯ ಸಹಚರರ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಪೊಲೀಸರು ಪ್ರಕರಣವನ್ನು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.

Edited By : Abhishek Kamoji
PublicNext

PublicNext

30/06/2025 07:15 am

Cinque Terre

32.63 K

Cinque Terre

4

ಸಂಬಂಧಿತ ಸುದ್ದಿ