", "articleSection": "Lifestyle,Crime,News", "image": { "@type": "ImageObject", "url": "https://prod.cdn.publicnext.com/s3fs-public/463655-1751272350-manjunath---2025-06-30T140224.329.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕಾಸರಗೋಡು: ಹಾಸಿಗೆ ಇದಷ್ಟು ಕಾಲು ಚಾಚಬೇಕು ಅಂತಾ ಗಾದೆ ಮಾತೆ ಇದೆ, ಆದರೆ ಇಲ್ಲೊಂದು ದಂಪತಿ ಸಾಲ ಮಾಡಿ ಮಗಳನ್ನ ಓದಿಸಿ ಅದ್ಧೂರಿಯಾಗಿ ಮದುವೆ...Read more" } ", "keywords": "couple in debt for daughter's marriage, daughter ignores parents in need, parents struggle after spending on daughter's wedding, financial crisis after marriage, ungrateful daughter, couple in financial trouble, daughter's wedding debt, parents in distress, unhelpful child, financial struggles after wedding expenses. ", "url": "https://dashboard.publicnext.com/node" }
ಕಾಸರಗೋಡು: "ಹಾಸಿಗೆ ಇದಷ್ಟು ಕಾಲು ಚಾಚಬೇಕು" ಅಂತಾ ಗಾದೆ ಮಾತೆ ಇದೆ, ಆದರೆ ಇಲ್ಲೊಂದು ದಂಪತಿ ಸಾಲ ಮಾಡಿ ಮಗಳನ್ನ ಓದಿಸಿ ಅದ್ಧೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದಾರೆ. ಆದರೆ ಇದೀಗ ಮಗಳು ಕೆಲಸದಲ್ಲಿದ್ದು, ಸ್ವತಃ ತಂದೆ ತಾಯಿಯನ್ನ ತಿರುಗಿ ನೋಡಿಲ್ಲ ಸಾಲ ಮರು ಪಾವತಿಗೆ ಇರುವ ಮನೆ ಕಳೆದುಕೊಂಡ ದಂಪತಿ ಇದೀಗ ಬೀದಿ ಪಾಲಾಗಿದ್ದಾರೆ.
ಕೇರಳದ ನೀಲೇಶ್ವರದ ಪಲ್ಲಿಕ್ಕರದ ಮುಂಡೇಮಾಡ ನಿವಾಸಿಯಾದ ಪದ್ಮನಾಭನ್ ಮತ್ತು ಅವರ ಪತ್ನಿ ದೇವಿ ಅವರಿಗೆ ಇದೀಗ ಬದುಕಲು ಗುಡಿಸಲು ಕೂಡಾ ಇಲ್ಲದಂತಾಗಿದೆ. 70 ವರ್ಷದ ಪದ್ಮನಾಭನ್ ಅವರು 2015ರಲ್ಲಿ ತಮ್ಮ ಮನೆ ಮತ್ತು ಭೂಮಿಯನ್ನು ಅಡವಿಟ್ಟು ನೀಲೇಶ್ವರಂ ಯೂನಿಯನ್ ಬ್ಯಾಂಕ್ನಿಂದ 16 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣವನ್ನು ಮಗಳು ಸಜಿತಾಳ ಮದುವೆ ಹಾಗೂ ಮನೆ ನವೀಕರಣಕ್ಕಾಗಿ ಬಳಸಿದ್ದಾರೆ.
ಸಾಲದ ಭಾಗವಾಗಿ ಈಗಾಗಲೇ 13 ಲಕ್ಷ ರೂ. ಮರುಪಾವತಿಸಿದ್ದಾರೆ. ಆದರೆ ಕೋವಿಡ್ ಸಮಯದಲ್ಲಿ ಮಗ ಉದ್ಯೋಗ ಕಳೆದುಕೊಂಡ ಕಾರಣ ಮರುಪಾವತಿ ವಿಳಂಬವಾಗಿದೆ. 2023ರಲ್ಲಿ ಬ್ಯಾಂಕ್ನವರು ಮನೆ ಹಾಗೂ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.
ತದನಂತರ ದಂಪತಿ ತಮ್ಮ ಹೊಲದಲ್ಲಿ ಟಾರ್ಪೊಲಿನ್ ಹೊದಿಸಿದ ಒಂದು ತಾತ್ಕಾಲಿಕ ಶೆಡ್ನಲ್ಲಿ ವಾಸವಿದ್ದು, ಇದೀಗ ಆ ಶೆಡ್ ಕೂಡ ಖಾಲಿ ಮಾಡಬೇಕೆಂದು ಬ್ಯಾಂಕ್ ನೌಕರರು ನೋಟಿಸ್ ನೀಡಿದ್ದಾರೆ. ಈ ನಡುವೆ ಬ್ಯಾಂಕಿಗೆ ಇನ್ನೂ ಸುಮಾರು 25 ಲಕ್ಷ ರೂ. ಬಾಕಿಯಿದ್ದು, ತೀವ್ರ ಆರ್ಥಿಕ ಸಂಕಷ್ಟದಲ್ಲಿ ಕುಟುಂಬ ಸಿಲುಕಿದೆ.
"ಜೀವನ ಅಂತ್ಯಗೊಳಿಸುವ ಹೊರತು ಬೇರೆ ದಾರಿ ಕಾಣುತ್ತಿಲ್ಲ," ಎಂದು ಕಣ್ಣೀರಿಟ್ಟ ದಂಪತಿ, ತಮ್ಮ ಮಗಳು ಸಜಿತಾಳನ್ನು ಸಂಪರ್ಕಿಸಿದರೂ, ಅವಳು ತಿರುಗಿ ನೋಡುವಷ್ಟಕ್ಕೂ ಸಹ ಸಮಯ ನೀಡಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ದೇವಿಯವರು, " ಕಷ್ಟಪಟ್ಟು ಮಗಳನ್ನ ಕಲಿಸಿ ಸಾಲ ಮಾಡಿ ಮದುವೆ ಮಾಡಿದ್ದೇವೆ" ಈಗ ಆಕೆ ಕೆಲಸದಲ್ಲಿದ್ದು ನಮ್ಮತ್ತ ಮುಖ ಹಾಕಿಲ್ಲ," ಎಂದು ಕಣ್ಣಿರಿಟ್ಟಿದ್ದಾರೆ.
ಸಜಿತಾ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಂತ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತ ಪದ್ಮನಾಭನ್ ಈಗ ಅನಾರೋಗ್ಯದಿಂದ ಬಳಲುತ್ತಿದ್ದು, ಮಗ ಆಟೋ ಚಾಲನೆ ಮಾಡುವ ಆದಾಯದಿಂದ ಜೀವನ ನಡೆಸುತ್ತಿದ್ದಾರೆ.
PublicNext
30/06/2025 02:03 pm