ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಬೆಳೆ ಹಾನಿ, ರೈತರ ಜಮೀನುಗಳಿಗೆ ಭೇಟಿ ನೀಡಿದ ಸಂಜಯ್ ಪಾಟೀಲ್

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸುರಿದ ಭಾರೀ ಮಳೆಗೆ ಜಿಲ್ಲೆಯಾದ್ಯಂತ ರೈತರ ಬೆಳೆ ಸಂಪೂರ್ಣ ಹಾಳಾಗಿದ್ದು ಸರ್ಕಾರ ಬೆಳೆ ಪರಿಹಾರ ನೀಡದೇ ಬೆಲೆ ಏರಿಕೆಯಲ್ಲಿ ನಿರತವಾಗಿ ರೈತರ ಜೀವಕ್ಕೆ ಕುತ್ತು ತಂದಿದ್ದಾರೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ತಾಲೂಕಿನ‌ ಮುತಗಾ ಮತ್ತು ಮಾರಿಹಾಳ ಗ್ರಾಮದ ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ರೈತರು ದೇಶಕ್ಕೆ ದುಡಿದು ಅನ್ನ ನೀಡುವ ಮಹತ್ಕಾರ್ಯದಲ್ಲಿ ಇರುವವರು. ಅತಿವೃಷ್ಟಿಯಿಂದ ರೈತರ ಬೆಳೆ ಹಾಳಾಗಿದ್ದು ರೈತರು ಕಂಗಾಲಾಗಿದ್ದಾರೆ. ಅವರ ನೆರವಿಗೆ ಧಾವಿಸಬೇಕಾಗಿದ್ದ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದ್ದು ಕೆಲ ನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಯಾವುದೇ ಕಾರಣಕ್ಕೂ ಎದೆಗುಂದದೆ ಧೈರ್ಯವಾಗಿ ಇರಬೇಕು. ನಿಮ್ಮ ಬೆನ್ನೆಲುಬಾಗಿ ಬಿಜೆಪಿ ಸದಾ ಇರುತ್ತದೆ.

ಅಮೂಲ್ಯವಾದ ಜೀವ ಕಳೆದುಕೊಳ್ಳಬಾರದು. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಬಿಜೆಪಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡದೆ ಯಾವುದೇ ಎನ್ ಡಿ.ಆರ್.ಎಫ್. ನಿಯಮ‌ ನೋಡದೆ ಬೆಳೆ ಹಾನಿಯಾದ ರೈತರ ಕುಟುಂಬಕ್ಕೆ ಪ್ರತಿ ಹೆಕ್ಟೇರ್ ಮಳೆ ಆಶ್ರಿತ ಬೆಳೆಗೆ 17800 ರೂಪಾಯಿ, ನೀರಾವರಿ ಬೆಳೆಗೆ 23500 ರೂಪಾಯಿ, ಹಾಗೂ ತೋಟಗಾರಿಕೆ ಬೆಳೆಗಳಿಗೆ 28500 ರೂಪಾಯಿ, ಮನೆಗೆ ಮನೆ ನೀರು ನುಗ್ಗಿದರೆ 10ಸಾವಿರ ರೂಪಾಯಿ, ಮಳೆಗೆ ಮನೆ ಹಾನಿಯಾದರೆ 5ಲಕ್ಷ ರೂಪಾಯಿ ಪರಿಹಾರ ನೀಡಿದ್ದೆವು.

ಕಾಂಗ್ರೆಸ್ ಸರ್ಕಾರ ಬಿಡಿಗಾಸು ನೀಡದಿರುವುದು ಆತಂಕದಲ್ಲಿರುವ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡ್ತಿದೆ. ಅನಾವೃಷ್ಟಿಯಿಂದಾಗಿ ಬೆಳೆಗಳಿಗೆ ಭಾರೀ ಹಾನಿ ಉಂಟಾದ ರೈತರೊಂದಿಗೆ ನೇರವಾಗಿ ಮಾತನಾಡಿ, ಹೊಲಗಳಲ್ಲಿ ಬೆಳೆ ನಾಶವಾದ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ರೈತರು ತಮ್ಮ ತೊಂದರೆಗಳನ್ನು ವಿವರಿಸಿ, ತಕ್ಷಣದ ಪರಿಹಾರ ಧನ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದರು. ಬೆಳೆ ನಾಶವಾದ ಹಳ್ಳಿಗಳ ರೈತರು ತಮ್ಮ ಜೀವನೋಪಾಯವೇ ತೊಂದರೆಗೊಳಗಾದ್ದರಿಂದ ಸರ್ಕಾರದ ಪ್ರತಿನಿಧಿಗಳು ರೈತರಿಗೆ ಧೈರ್ಯ ನೀಡಿ ತಕ್ಷಣ ನೆರವು ನೀಡುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮೀಣ ಮತಕ್ಷೇತ್ರದ ಮಂಡಲ ಅಧ್ಯಕ್ಷ ಯುವರಾಜ ಜಾಧವ, ಉಮೇಶ ಪೂರಿ, ಲಕ್ಷ್ಮಣ ದೇವರೋಜಿ, ಅಡಿವೇಶ ಅಂಗಡಿ, ಸಿದ್ದಯ್ಯ ಪೂಜಾರ, ಮಲ್ಲಯ್ಯ ಪೂಜಾರ, ಉಪ್ಪಿನ, ಸುಭಾಷ ಚೌಗಲೆ, ರಾಜು ಕನಬುರ್ಗಿ, ಪ್ರಮೋದ ಪಾಟೀಲ, ಭೀಮರಾಂ ಬಡೋಚಿ, ಪರುಶರಾಮ ಕೇದಾರ ಸೇರಿದಂತೆ ಅನೇಕ ರೈತರು ಕಾರ್ಯಕರ್ತರು ಇದ್ದರು.

Edited By : Manjunath H D
PublicNext

PublicNext

08/09/2025 12:52 pm

Cinque Terre

16.76 K

Cinque Terre

0

ಸಂಬಂಧಿತ ಸುದ್ದಿ