ಧಾರವಾಡ: ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೂರ್ತಿ ಮೆರವಣಿಗೆ ವೇಳೆ ಒಂದು ಕೋಮಿನ ಜನ ಕಲ್ಲು ತೂರಿ ಗಲಾಟೆ ನಡೆಸಿದ್ದು ಒಂದೆಡೆಯಾದರೆ, ಇತ್ತ ಧಾರವಾಡದಲ್ಲಿ ಹಿಂದೂ, ಮುಸ್ಲಿಂರು ಕೂಡಿಕೊಂಡೇ ಭಾವೈಕ್ಯದ ಗಣೇಶ ಚತುರ್ಥಿ ಆಚರಿಸಿದ್ದಾರೆ.
ಹೌದು! ಧಾರವಾಡ ತಾಲೂಕಿನ ಇಟಿಗಟ್ಟಿಯ ರೇವಡಿಹಾಳ ಓಣಿಯ 13ನೇ ದಿನದ ಗಣಪತಿ ಮೂರ್ತಿಯನ್ನು ಸೋಮವಾರ ವಿಸರ್ಜನೆ ಮಾಡಲು ಡಿಜೆ ಹಚ್ಚಿ ಮೆರವಣಿಗೆ ಮೂಲಕ ಹೊರಟಿತ್ತು. ಈ ವೇಳೆ ಮುಸ್ಲಿಂ ಮುಖಂಡರು ಗಣೇಶನ ಮೂರ್ತಿಗೆ ತಾವೂ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಹಬ್ಬ, ಹರಿದಿನಗಳು ಕೋಮು-ಕೋಮುಗಳ ನಡುವೆ ಗಲಾಟೆ ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಇಟಿಗಟ್ಟಿ ಗ್ರಾಮದ ಜನ ಭಾವೈಕ್ಯತೆ ಮೂಲಕ ಗಣೇಶ ಚತುರ್ಥಿ ಆಚರಿಸಿ ಮಾದರಿ ಎನಿಸಿದ್ದಾರೆ.
Kshetra Samachara
09/09/2025 04:40 pm