ಚಾಮರಾಜನಗರ : ತಮಿಳುನಾಡಿನ ಹಾಸನೂರು ಬಳಿಯ ಕಾರ್ಯಪಾಳ್ಯ ಚಕ್ ಪೋಸ್ಟ್ ಬಳಿ ಎದುರಾದ ಒಂಟಿ ಸಲಗವೊಂದು ಭಯದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.
ಚಾಮರಾಜನಗರ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಕಾರ್ಯಪಾಳ್ಯದ ಚೆಕ್ ಪೋಸ್ಟ್ ಬಳಿ ಬೆಳ್ಳಂಬೆಳಗ್ಗೆ ಎದುರಾದ ನೀಲದಂತದ ಒಂಟಿ ಸಲಗವನ್ನು ಕಂಡ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ, ನೇರ ಕಚೇರಿ ಸಮೀಪ ಆಗಮಿಸುತ್ತಿದ್ದಂತೆ ಸಲಗವನ್ನು ಹಿಮ್ಮೆಟ್ಟಿಸಲು ಸದ್ದು ಮಾಡಿದ ವೇಳೆ ತಿರುಗಿ ಬೀಳುವ ಮುನ್ಸೂಚನೆ ಕೊಟ್ಟರೂ ಸಹ ಹೆದರದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ.
PublicNext
27/01/2026 11:06 am
LOADING...