ಕುಂದಗೋಳ : ಗ್ರಾಹಕರಿಗೆ ಅವಶ್ಯ ಸಮಯಕ್ಕೆ ಹಣ ಒದಗಿಸಬೇಕಾದ ಎಸ್ ಬಿಐ ಎಟಿಎಂ ಅವ್ಯವಸ್ಥೆಗೆ ತಲುಪಿ ಸ್ವಚ್ಛತೆ, ನಿರ್ವಹಣೆ 'ಮಾಯ'ವಾಗಿದೆ.
ಕುಂದಗೋಳ ಬಸ್ ನಿಲ್ದಾಣದ ಬಳಿ ಇರುವ ಎಸ್.ಬಿ.ಐ ಎಟಿಎಂ ಕಳೆದ ಎರಡು ದಿನಗಳಿಂದ ನಗದು ವಹಿವಾಟಿಗೆ ಪೂರಕವಾಗಿಲ್ಲಾ . ಮುಖ್ಯವಾಗಿ ಎಟಿಎಂ ತುಂಬಾ ಧೂಳು, ರಶೀದಿಗಳೇ ಬಿದ್ದು ಅವ್ಯವಸ್ಥೆ ತಾಳಿದೆ.
ಎಟಿಎಂ ಎಸಿ ಮತ್ತು ಕ್ಯಾಮೆರಾ ಸುತ್ತ ಜೇಡ ಕಟ್ಟಿದ್ದು, ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಬೇಸರ ತಂದಿದೆ.
ಒಟ್ಟಿನಲ್ಲಿ ಅವಶ್ಯಕ ಸಮಯಕ್ಕೆ ಹಣ ಸಿಕ್ತು ಎಂದು ಎಸ್.ಬಿ.ಐ ಎಟಿಎಂಗೆ ಬರುವ ಗ್ರಾಹಕರಿಗೆ ಒಳಗಿನ ವಾತಾವರಣ, ತಾಂತ್ರಿಕ ಸಮಸ್ಯೆ ಸಾಕಾಗಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
04/02/2026 09:39 pm
LOADING...