ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಪಾಲಿಕೆ ಆಸ್ತಿ ಹರಾಜು ಮತ್ತೆ ಮುಂದೂಡಿಕೆ: ಬಿಡ್‌ದಾರರ ನಿರಾಸಕ್ತಿ!

ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1 ಮತ್ತು ವಲಯ-2ರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ 81 ಆಸ್ತಿಗಳಿಂದ ಬಾಕಿ ಇರುವ ರೂ.1.94 ಕೋಟಿ ವಸೂಲಿ ಮಾಡುವ ಉದ್ದೇಶದಿಂದ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರ ನಿರ್ದೇಶನದಂತೆ ಇಂದು ಮಧ್ಯಾಹ್ನ 3:00 ಗಂಟೆಗೆ ಯಲಹಂಕ ಮಿನಿ ವಿಧಾನಸೌಧದ 3ನೇ ಮಹಡಿಯ ಸಭಾಂಗಣದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲಾಗಿತ್ತು.

ಈ ಹರಾಜು ಪ್ರಕ್ರಿಯೆಯನ್ನು ನಗರ ಪಾಲಿಕೆಯ ಅಪರ ಆಯುಕ್ತರು (ಕಂದಾಯ) ಹಾಗೂ ವಲಯ-1 ಮತ್ತು ವಲಯ-2ರ ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರುಗಳ ಸಮ್ಮುಖದಲ್ಲಿ ನಡೆಸಲಾಯಿತು.

ಸಾಕಷ್ಟು ಅವಕಾಶಗಳಿದ್ದರೂ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳನ್ನು ಕಾಯ್ದೆ ಮತ್ತು ನಿಯಮಗಳ ಅನ್ವಯ ಹರಾಜು ಪ್ರಕ್ರಿಯೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿತ್ತು.

ಈ ಹರಾಜು ಪ್ರಕ್ರಿಯೆಯಲ್ಲಿ 5ಕ್ಕೂ ಹೆಚ್ಚು ಬಿಡ್ ದಾರರು ಭಾಗವಹಿಸಿದ್ದರು. ಆದರೆ ಯಾವುದೇ ಆಸ್ತಿಗೆ ಬಿಡ್ ಮಾಡಲು ಬಿಡ್ ದಾರರು ಮುಂದೆ ಬರದ ಕಾರಣ ಸದರಿ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಕಳೆದ ಮಾರ್ಚ್ 6 ರಂದು ಹರಾಜು ಪ್ರಕ್ರಿಯೆಯನ್ನು ಆಯೋಜಿಸಲಾಗಿತ್ತು. ಆಗಲೂ ಬಿಡ್ ದಾರರು ಯಾವುದೇ ಆಸ್ತಿಗೆ ಬಿಡ್ ಮಾಡದ ಕಾರಣ, ಹರಾಜನ್ನು ಮುಂದೂಡಲಾಗಿತ್ತು.

ಹರಾಜು ಪ್ರಕ್ರಿಯೆಗೆ ಇಡಲಾದ ಎಲ್ಲಾ ಆಸ್ತಿಗಳನ್ನು ನಗರ ಪಾಲಿಕೆಯ ವಶದಲ್ಲಿರಿಸಿ, ಮುಂದಿನ ದಿನಗಳಲ್ಲಿ ಹರಾಜು ಪ್ರಕ್ರಿಯೆಯನ್ನು ಮರು ಆಯೋಜಿಸಲಾಗುವುದು.

Edited By : Abhishek Kamoji
Kshetra Samachara

Kshetra Samachara

13/03/2026 09:01 pm

Cinque Terre

224

Cinque Terre

0

ಸಂಬಂಧಿತ ಸುದ್ದಿ