ಮೈಸೂರು: ಅಂಧತ್ವ ನಿವಾರಣೆಗೆ ಸಹಕರಿಸಿ ಬಡವರಿಗೆ ಸಹಾಯ ಹಸ್ತ ಚಾಚುವ ಮನಸ್ಸು ಬೆಳೆಸಿಕೊಳ್ಳಿ ಎಂದು ಸಮಾಜ ಸೇವಕ ಹಾಗೂ ನಟ ದರ್ಶನ್ ಅತ್ಯಾಪ್ತ ಗೆಳೆಯ ಕಾಳಪ್ಪ ಹೇಳಿದ್ದಾರೆ.
ತಿಂಗಳ ಪ್ರತಿ ಎರಡನೇ ಶನಿವಾರ ಬನ್ನೂರಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ ಮಾಡಲಾಗುತ್ತದೆ. ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ, ಕೊಯಮತ್ತೂರಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಬರಲಾಗುತ್ತದೆ, ಔಷಧಿಗಳನ್ನು ಸಹ ಉಚಿತವಾಗಿ ನೀಡುತ್ತೇವೆ ದೃಷ್ಟಿ ದೋಷ, ರಾತ್ರಿ ಕುರುಡು, ಕಣ್ಣಿನಲ್ಲಿ ಪೊರೆ ಎಲ್ಲದಕ್ಕೂ ಚಿಕಿತ್ಸೆ ಮಾಡಿಸುತ್ತೇವೆ ಬಡವರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮಹೇಂದ್ರ ಸಿಂಗ್ ಕಾಳಪ್ಪ ಮನವಿ ಮಾಡಿದರು.
PublicNext
17/03/2026 11:08 am
LOADING...