ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಕ್ತಿಯ ಜಾತ್ರೆಯಲ್ಲಿ ಗಲಾಟೆ: ಗದಗದಲ್ಲಿ ರಥೋತ್ಸವದ ಪಾವಿತ್ರ್ಯಕ್ಕೆ ಧಕ್ಕೆ!

ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರೆಯ ರಥೋತ್ಸವ ವೇಳೆ ಕಾರಿನ ವಿಚಾರವಾಗಿ ಗಲಾಟೆ ಉಂಟಾಗಿ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಗುರುವಾರ ನಡೆದ ಜಾತ್ರೆಯ ರಥೋತ್ಸವದಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಈ ವೇಳೆ ರಥೋತ್ಸವ ಸಾಗುತ್ತಿರುವ ದಾರಿ ಮಧ್ಯೆ ಸಲೀಂ ಬಡೇಖಾನ್‌ ಮತ್ತು ಅವರ ತಂಡ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ರಥ ಸಾಗುವ ದಾರಿಯಲ್ಲಿ ಕಾರು ನಿಂತಿದ್ದರಿಂದ ಜಾತ್ರಾ ಸಮಿತಿ ಸದಸ್ಯರು ಕಾರನ್ನು ಸೈಡಿಗೆ ತೆಗೆದುಕೊಳ್ಳುವಂತೆ ವಿನಂತಿಸಿದರು.

ಆದರೆ ಈ ಮಾತಿನ ಮೇಲೆ ವಾಗ್ವಾದ ಶುರುವಾಗಿ, ಪರಿಸ್ಥಿತಿ ತೀವ್ರಗೊಂಡು ಹಲ್ಲೆಗೆ ತಿರುಗಿದೆಯೆಂಬ ಆರೋಪ ಕೇಳಿಬಂದಿದೆ. ಜಾತ್ರಾ ಸಮಿತಿಯ ಕೆಲ ಯುವಕರ ಮೇಲೆ ಸಲೀಂ ತಂಡ ದಾಳಿ ನಡೆಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಜಾತ್ರಾ ಸಮಿತಿ ಸದಸ್ಯರು ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಲೀಂ ಬಡೇಖಾನ್, ಲೋಕೇಶ್‌ ರಾಮಜಿ ಮತ್ತು ಮಂಜುನಾಥ್ ಹಾದಿಮನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Edited By : Manjunath H D
PublicNext

PublicNext

20/03/2026 09:18 pm

Cinque Terre

12.67 K

Cinque Terre

1