ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರದಲ್ಲಿ ರಂಜಾನ್ ಶಾಂತಿಯುತ ಆಚರಣೆಗೆ ಬಿಗಿ ಭದ್ರತೆ! - 60 ಈದ್ಗಾ ಮೈದಾನದಲ್ಲಿ ಪೂಜೆ

ಹೊಸಪೇಟೆ: ರಂಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ತಿಳಿಸಿದ್ದಾರೆ.

ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಂಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಾಳೆ ಜಿಲ್ಲೆಯ 60 ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಭದ್ರತಾ ಸಿಬ್ಬಂದಿ ನಿಯೋಜನೆ

ಜಿಲ್ಲಾದ್ಯಂತ ಒಬ್ಬರು ಎಸ್.ಪಿ., ಮೂವರು ಡಿವೈಎಸ್.ಪಿ., 14 ಪಿ.ಐ., 30 ಪಿ.ಎಸ್.ಐ., 600 ಹೆಚ್.ಸಿ. ಮತ್ತು ಪಿ.ಸಿ. ಹಾಗೂ 300 ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಒಟ್ಟು 948 ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, 112 ಗಸ್ತು ವಾಹನಗಳು ಸದಾ ಸಂಚಾರದಲ್ಲಿರಲಿವೆ. ಡಿಎಆರ್ (DAR) ಮತ್ತು ಕೆಎಸ್‌ಆರ್‌ಪಿ (KSRP) ತುಕಡಿಗಳನ್ನು ಸಹ ಆಯಕಟ್ಟಿನ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಎಸ್.ಪಿ. ಜಾಹ್ನವಿ ಮಾಹಿತಿ ನೀಡಿದರು.

Edited By : Manjunath H D
PublicNext

PublicNext

20/03/2026 10:50 pm

Cinque Terre

12.94 K

Cinque Terre

0

ಸಂಬಂಧಿತ ಸುದ್ದಿ