ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮದಲ್ಲಿರುವ ಬೆಳಗೆರೆ ಕೃಷ್ಣಶಾಸ್ತ್ರಿಗಳ ಸ್ಮಾರಕ ಗುಡಿಸಲಿನಲ್ಲಿ ಮೇ.22 ರಿಂದ ಎರಡು ದಿನಗಳ ಕಾಲ ಕೃಷ್ಣಶಾಸ್ತ್ರಿಗಳ 111 ನೇ ಜಯಂತಿ ಕಾರ್ಯಕ್ರಮ ಆಚರಿಸಲು ಶಾರದಾಮಂದಿರ ವಿದ್ಯಾಸಂಸ್ಥೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
1990 ರ ಕಾಲಘಟ್ಟದಲ್ಲಿ ಶಾಸ್ತ್ರಿಗಳ ಕರ್ಮಶೀಲತೆ ಆರ್ಥಿಕ ಮತ್ತು ಸಾತ್ವಿಕ ಚೈತನ್ಯ ನೀಡಿದ ಸಂಸ್ಕೃತಿ ಕಾಪಾಡಿಕೊಳ್ಳಬೇಕಿದೆ. ಇದರ ಸಲುವಾಗಿ ಶಾಸ್ತ್ರಿಗಳ ಶಿಷ್ಯರು, ಅಭಿಮಾನಿಗಳು ಮತ್ತು ಸಾಹಿತ್ಯ ಹಿತಚಿಂತಕರು ಸೇರುವ ಎರಡು ದಿನಗಳ ಕಾರ್ಯಕ್ರಮದಲ್ಲಿ ' ನಾನಿದ್ದೂ ನನ್ನದೇನಿಲ್ಲ' ಎಂಬ ಕೃತಿ ಬಿಡುಗಡೆ ಸೇರಿ ಶಾಸ್ತ್ರಿಗಳ ಜತೆಗಿನ ನೂರು ವರ್ಷದ ವರ್ಧಂತಿಯ ಆಚರಣೆ, ಅವರ ಸಮಗ್ರ ಸಾಹಿತ್ಯವನ್ನೊಳಗೊಂಡ ' ನೂರರ ನೆನಪು' ಪುಸ್ತಕ ಲೋಕಾರ್ಪಣೆ ನಡೆಯಲಿದೆ ಎಂದು ವಿದ್ಯಾ ಮಂದಿರ ಕಾರ್ಯಕಾರಿ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿದ್ಯಾ ಸಂಸ್ಥೆ ಮನವಿ ಮಾಡಿದೆ
Kshetra Samachara
21/05/2026 09:25 am
LOADING...