ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚರಂಡಿ ನಿರ್ಮಾಣ ಕಾಮಗಾರಿ ! ಅಪಾಯ ಸಂಭವಿಸಿದ್ರೇ ಯಾರು ಹೊಣೆ ?

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸನಾದಿ ಅಪ್ಪಣ್ಣ ವೃತ್ತದ ಬಳಿ ನಡೆಯುತ್ತಿರುವ ಚರಂಡಿ ನಿರ್ವಹಣೆ ಕಾಮಗಾರಿ ಸದ್ಯ ಮತ್ತಷ್ಟೂ ಅಪಾಯದ ಮುನ್ಸೂಚನೆಗೆ ಕಾರಣವಾಗಿದೆ.

ಹೌದು ! ಹುಬ್ಬಳ್ಳಿ ಸನಾದಿ ಅಪ್ಪಣ್ಣ ವೃತ್ತದ ಬಳಿ ಬೃಹತ್ ತಗ್ಗು ಬಿದ್ದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು, ಆ‌ ವರದಿ ಬಳಿಕ ಚರಂಡಿ ಕಾಮಗಾರಿ ನಿರ್ವಹಣೆ ನಡೆದಿದ್ದು, ಕಾಮಗಾರಿ ಸ್ಥಳದಲ್ಲಿ ತಗ್ಗು ತೋಡಿ ಯಾವುದೇ ಮುನ್ಸೂಚನೆ ಫಲಕ, ಕಾಮಗಾರಿ ಅಕ್ಕಪಕ್ಕದಲ್ಲಿ ಸುರಕ್ಷತಾ ಕ್ರಮ ಅನುಸರಿಸದೇ ಕೈ ಬಿಡಲಾಗಿದೆ. ಈ ಪರಿಣಾಮ ನಾಲ್ಕು ರಸ್ತೆ ಸೇರುವ ನಿತ್ಯ ಸಾವಿರಾರು ವಾಹನ ಸಂಚರಿಸುವ ಸನಾದಿ ಅಪ್ಪಣ್ಣ ವೃತ್ತದ ಬಳಿ ವಾಹನ ಸವಾರರಿಗೆ ಯಾವಾಗ ? ಯಾವ ಅನಾಹುತ ಸಂಭವಿಸುತ್ತೋ ತಿಳಿಯದಾಗಿದೆ.

ಸದ್ಯ ಈ ಬೃಹತ್ ಚರಂಡಿ ನಿರ್ವಹಣೆ ಕಾಮಗಾರಿ ಬಳಿ ವಾಹನ ಸವಾರರಿಗೆ ಎಚ್ಚರಿಕೆ ಫಲಕ, ತಗ್ಗು ತೋಡಿರುವ ಜಾಗದ ಸುತ್ತ ಭದ್ರತೆ, ರಾತ್ರಿ ವೇಳೆ ಕಾಮಗಾರಿ ಸ್ಥಳದಲ್ಲಿ ರಿಫ್ಲೆಕ್ಟರ್ ಇಲ್ಲದೆ ಇರುವುದು ಅಪಾಯಕ್ಕೆ ಆಹ್ವಾನವಾಗಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

15/06/2026 03:36 pm

Cinque Terre

1.65 K

Cinque Terre

0

ಸಂಬಂಧಿತ ಸುದ್ದಿ