ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಮಾತೃಶ್ರೀ ಚೆನ್ನಮ್ಮ ಅಗಲಿಕೆಗೆ ಇಡೀ ಜಿಲ್ಲೆಯೇ ಸ್ತಬ್ಧ.. ಕಣ್ಣೀರು ತರಿಸುತ್ತಿವೆ ಅಂತಿಮ ಯಾತ್ರೆಯ ಈ ದೃಶ್ಯಗಳು!

ಹಾಸನ : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಮತ್ತು ಅಂತ್ಯಕ್ರಿಯೆಯ ಭಾವುಕ ದ್ರೋಣ್ ದೃಶ್ಯಗಳು ಪ್ರತಿಯೊಬ್ಬರ ಮನ ಕಲಕುವಂತಿದೆ. ಇಡೀ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಕಣ್ಣೀರಿನ ನಡುವೆ ಮಾತೃಶ್ರೀ ಚೆನ್ನಮ್ಮ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ನೆರವೇರುತ್ತಿವೆ.

ಹರದನಹಳ್ಳಿಯಲ್ಲಿ ಸಜ್ಜುಗೊಳಿಸಲಾಗಿರುವ ಅಂತ್ಯಕ್ರಿಯೆ ನಡೆಯುವ ಸ್ಥಳದ ಆಕಾಶಮಾರ್ಗದ ದೃಶ್ಯಗಳು ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿರುವುದನ್ನು ಬಿಂಬಿಸುತ್ತಿವೆ. ದ್ರೋಣ್ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಅಂತಿಮ ಯಾತ್ರೆಯ ದೃಶ್ಯಗಳು, ತಮ್ಮ ನೆಚ್ಚಿನ ತಾಯಿಯನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಸಾಗರೋಪಾದಿಯ ಜನಸ್ತೋಮವನ್ನು ತೋರ್ಪಡಿಸುತ್ತಿವೆ. ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಲು ಬಂದಿರುವ ಗಣ್ಯರು ಹಾಗೂ ಸಾರ್ವಜನಿಕರ ಶಿಸ್ತುಬದ್ಧ ಸಾಲುಗಳು ಮತ್ತು ಒಟ್ಟಾರೆ ಪರಿಸರದ ದೃಶ್ಯಾವಳಿಗಳು ನೋಡುಗರ ಮನ ಕರಗಿಸುವಂತಿದ್ದು, ಇಡೀ ಹಾಸನ ಜಿಲ್ಲೆಯಲ್ಲಿ ಶೋಕದ ವಾತಾವರಣ ಮನೆಮಾಡಿದೆ.

Edited By :
PublicNext

PublicNext

20/07/2026 02:51 pm

Cinque Terre

11.7 K

Cinque Terre

0

ಸಂಬಂಧಿತ ಸುದ್ದಿ