ಕೋಲಾರ - ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಮಳೆ ಕೊರತೆ ಹಾಗೂ ಮಧ್ಯಂತರ ಒಣಹವೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರೈತರು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ವೈಜ್ಞಾನಿಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಕೋಲಾರದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಶೇ 29 ಮಳೆ ಕೊರತೆ ದಾಖಲಾಗಿದೆ. ಸುಮಾರು 85 ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ನಿಗದಿಯಾಗಿದ್ದರೂ, ಇದುವರೆಗೆ ಕೇವಲ 4,077 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಹೆಚ್ಚಿನ ರೈತರು ಉತ್ತಮ ಹಾಗೂ ನಿರಂತರ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ, ಮುಂದಿನ ಕೆಲವು ದಿನಗಳಲ್ಲಿ ಮಳೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಳೆ ನಿರ್ವಹಣೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದಿದ್ದಾರೆ.
ಮಣ್ಣಿನ ತೇವಾಂಶ ಸಂರಕ್ಷಣೆಗಾಗಿ ಅಡ್ಡ ಗೆರೆ ನಿರ್ಮಾಣ, ಸಂರಕ್ಷಣಾ ಉಳುಮೆ, ಮಲ್ಚಿಂಗ್, ಸಾವಯವ ಗೊಬ್ಬರಗಳ ಬಳಕೆ, ಮಳೆನೀರು ಸಂಗ್ರಹಣೆ ಹಾಗೂ ಅಗತ್ಯವಿದ್ದಲ್ಲಿ ಜೀವ ರಕ್ಷಕ ನೀರಾವರಿ ಕೈಗೊಳ್ಳಬೇಕು. ಗೊಬ್ಬರಗಳನ್ನು ಒಂದೇ ಬಾರಿ ನೀಡುವ ಬದಲು ಹಂತ ಹಂತವಾಗಿ ನೀಡುವುದು ಹಾಗೂ ಮಳೆಯ ಸ್ಥಿತಿಗೆ ಅನುಗುಣವಾಗಿ ಬೆಳೆ ನಿರ್ವಹಣೆ ಮಾಡುವುದು ಉತ್ತಮ ಎಂದು ತಿಳಿಸಿದರು.
Kshetra Samachara
31/07/2026 12:57 pm
LOADING...