ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಶಿವಮೊಗ್ಗ: 34 ವರ್ಷಗಳ ಬಳಿಕ ಕಳ್ಳ ಅರೆಸ್ಟ್ - ತೀರ್ಥಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ

​ಶಿವಮೊಗ್ಗ: ಸುಮಾರು 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿಯೊಬ್ಬನನ್ನು ತೀರ್ಥಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಬಂಧಿತ ಆರೋಪಿಯನ್ನು ಶಿಕಾರಿಪುರದ ಮತ್ತಿಗೆ ಮೂಲದ, ಹಾಲಿ ಸಾಗರ ನಿವಾಸಿ ಶೇಖರ ಅಲಿಯಾಸ್ ಮತ್ತಿಗೆ ಶೇಖರ (65) ಎಂದು ಗುರುತಿಸಲಾಗಿದೆ.

​ಆರೋಪಿ ಶೇಖರನ ವಿರುದ್ಧ 1990ರಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಕನ್ನಗಳವು (Crime No: 174/1990, 175/1990, 177/1990 U/s 457, 380 IPC) ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ದಾಖಲಾದ ದಿನದಿಂದಲೂ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈ ಸಂಬಂಧ ನ್ಯಾಯಾಲಯವು LPR ಸಂಖ್ಯೆ: 07/97, 08/97, 09/97 ರಡಿಯಲ್ಲಿ ವಿಚಾರಣೆ ಕೈಗೊಂಡಿತ್ತು.

ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಚ್ಚಿ ರವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಪಿಐ ಇಮ್ರಾನ್ ಬೇಗ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ​ಸಿಬ್ಬಂದಿಗಳಾದ ಲಿಂಗೇಗೌಡ, ರಾಘವೇಂದ್ರ, ಮತ್ತು ಶಿವಶಂಕರ ಕುಂಬಾರ ರವರು ಸಾಗರದಲ್ಲಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಪ್ರಸ್ತುತ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Edited By : Vijay Kumar
PublicNext

PublicNext

31/07/2026 02:22 pm

Cinque Terre

8.65 K

Cinque Terre

1

ಸಂಬಂಧಿತ ಸುದ್ದಿ