ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮವಾಗಿ ಕಾಡು ಹಂದಿ ಬೇಟೆಯಾಡಿದ ನಾಲ್ವರು ಆರೋಪಿಗಳ ಬಂಧನ

ಹಗರಿಬೊಮ್ಮನಹಳ್ಳಿ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಗಿಮಾವಿನಹಳ್ಳಿ ಗ್ರಾಮದ ಚಿಕ್ಕಕೆರೆ ಬಳಿ ಅಕ್ರಮವಾಗಿ ಕಾಡು ಹಂದಿಯನ್ನು ಬೇಟೆಯಾಡಿದವರನ್ನು ಬಂಧಿಸಲಾಗಿದೆ.

ಮಾಂಸದ ಸ್ವಂತ ಬಳಕೆ ಹಾಗೂ ಮಾರಾಟದ ಉದ್ದೇಶದಿಂದ ಅದನ್ನು ತುಂಡುಗಳಾಗಿ ಕತ್ತರಿಸುತ್ತಿದ್ದ ಹನುಮನಹಳ್ಳಿಯ ಪರಶುರಾಮ, ಮಾಗಿಮಾವಿನಹಳ್ಳಿಯ ಕೆ. ಪಾಂಡುರಂಗ, ಇದೇ ಗ್ರಾಮದವರಾದ ಸೋಮಪ್ಪ ತಲೆಮಾರದ್, ಪ್ರಭಾಕರ್ ತಲೆಮಾರದ್ ಎಂಬುವವರನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಈ ಕೃತ್ಯಕ್ಕಾಗಿ ನಾಲ್ವರೂ ಆರೋಪಿಗಳ ವಿರುದ್ಧ 'ವನ್ಯಜೀವಿ ಸಂರಕ್ಷಣಾ ಕಾಯ್ದೆ 1972' ರಡಿಯಲ್ಲಿ ವನ್ಯಜೀವಿ ಅಪರಾಧ ವರದಿಯನ್ನು (WCR) ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

05/08/2026 02:29 pm

Cinque Terre

640

Cinque Terre

0

ಸಂಬಂಧಿತ ಸುದ್ದಿ