ಹಾವೇರಿ: ಪ್ರಪ್ರಥಮವಾಗಿ ಸಚಿವ ಸ್ಥಾನ ಪಡೆದ ನಂತರ ರುದ್ರಪ್ಪ ಲಮಾಣಿ ಹಾವೇರಿ ನಗರಕ್ಕೆ ಆಗಮಿಸುತ್ತಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಬರಗಾಲ ಇರೋ ಹಿನ್ನಲೆಯಲ್ಲಿ ಯಾವುದೇ ಮೆರವಣಿಗೆ ಮತ್ತು ಸಂಭ್ರಮಾಚರಣೆಗಳು ಮಾಡದೆ ಸರಳವಾಗಿ ಆಚರಣೆ ಮಾಡಲು ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ್ ನೀರಲಗಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಹೀಗಾಗಿ ಸರಳವಾಗಿ
ವೀರಭದ್ರೇಶ್ವರ ದೇವಸ್ಥಾನ, ಮಸೀದಿ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ನಂತರ ಕ್ಷೇತ್ರದ ಜನರ ಸಂದರ್ಶನ ಮಾಡಲಿದ್ದಾರೆ.
ಜಿಲ್ಲೆಗೆ ಇನ್ನೊಂದು ಸಚಿವಸ್ಥಾನ ಸಿಗುವ ಭರವಸೆ ಇದೆ.
ಕುರುಬ ಕೋಟಾದಲ್ಲಿ ಬ್ಯಾಡಗಿ ಹಿರಿಯ ಶಾಸಕ ಬಸವರಾಜ್ ಶಿವಣ್ಣನವರ್ ಗೆ ನೀಡುವ ವಿಶ್ವಾಸ ಇದೆ ಎಂದು ನೀರಲಗಿ ತಿಳಿಸಿದರು.
PublicNext
05/08/2026 08:00 pm
LOADING...