ಹಾವೇರಿ: ವಿಧಾನ ಪರಿಷತ್ ನಲ್ಲಿ ಯಾರು ಬಹುಮತ ತೋರಿಸುತ್ತಾರೋ ಅವರು ಸಭಾಪತಿಯಾಗುತ್ತಾರೆ ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ದೇಶದ ಕಾನೂನು ಎಲ್ಲರಿಗೂ ಗೊತ್ತಿದೆ ಎಂದರು.
ಬಸವರಾಜ ಹೊರಟ್ಟಿ ಪರಿಷತ್ ಸಭಾಪತಿ ಸ್ಥಾನದಿಂದ ಕೆಳಗಿಳಿಯದಿದ್ದರೆ ಕಾಂಗ್ರೆಸ್ ನಡೆ ಏನು ಎಂಬ ಪ್ರಶ್ನೆಗೆ ರುದ್ರಪ್ಪ ಲಮಾಣಿ ಈ ರೀತಿ ಪ್ರತಿಕ್ರಿಯೆ ನೀಡಿದರು.
ಪರಿಷತ್ ನಲ್ಲಿ ಬಹುಮತ ಯಾರು ಸಾಬೀತು ಆಗುತ್ತೋ ಅವರದು ಆಗುತ್ತೆ ಎಂದು ರುದ್ರಪ್ಪ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದಿದ್ದರು.
ಆದರೆ, ಮೆಜಾರಿಟಿ ಸಮಸ್ಯೆ ಆಯ್ತು. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕಾಯ್ತು ಎಂದರು.
PublicNext
05/08/2026 10:50 pm
LOADING...