", "articleSection": "WaterPower,Nature,Human Stories", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/431249_1750423645_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ: ನಗರದ ಯುದ್ಧನೌಕೆ ಮ್ಯೂಸಿಯಂ ಬಳಿ ಇರುವ ಕಾಲುವೆಯಲ್ಲಿ ಎಂಜಿನ್ ಆಯಿಲ್ ನಂತ ದ್ರಾವಣ ಸಂಗ್ರಹವಾಗಿದ್ದು ನೀರಿನೊಂದಿಗೆ ಸಮುದ್ರ ಸೇರುವ ಆತ...Read more" } ", "keywords": "Node", "url": "https://dashboard.publicnext.com/node" } ಕಾರವಾರ: ಸಮುದ್ರಕ್ಕೆ ಸೇರುವ ನೀರಿನಲ್ಲಿ ಆಯಿಲ್‌ ಪತ್ತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಸಮುದ್ರಕ್ಕೆ ಸೇರುವ ನೀರಿನಲ್ಲಿ ಆಯಿಲ್‌ ಪತ್ತೆ

ಕಾರವಾರ: ನಗರದ ಯುದ್ಧನೌಕೆ ಮ್ಯೂಸಿಯಂ ಬಳಿ ಇರುವ ಕಾಲುವೆಯಲ್ಲಿ ಎಂಜಿನ್ ಆಯಿಲ್ ನಂತ ದ್ರಾವಣ ಸಂಗ್ರಹವಾಗಿದ್ದು ನೀರಿನೊಂದಿಗೆ ಸಮುದ್ರ ಸೇರುವ ಆತಂಕ ಎದುರಾಗಿದೆ. 

ಇಲ್ಲಿನ ಚಾಪೆಲ್ ಯುದ್ಧನೌಕೆ ಮ್ಯೂಸಿಯಂ ಹಾಗೂ ಮಕ್ಕಳ ಉದ್ಯಾನದ ನಡುವೆ ಮಳೆ ನೀರು ಸಮುದ್ರಕ್ಕೆ ಸೇರಲು ಒಂದು ಕಾಲುವೆ ನಿರ್ಮಾಣ ಮಾಡಲಾಗಿದೆ. ಈ ಕಾಲುವೆಯಲ್ಲಿ ಗುರುವಾರ ಕಾಲುವೆಯಲ್ಲಿ ಇಂಜಿನ ಆಯಿಲ್‌ನಂತೆ ಗೋಚರಿಸುವ ಕಪ್ಪುದ್ರಾವಣ ಕಂಡು ಬಂದಿದೆ. ಸದ್ಯ ಈ ದ್ರಾವಣವು ಸಮುದ್ರ ಸೇರಿ ಸಾಗರದ ಜೈವಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಆಯಿಲ್ ಸಮುದ್ರ ಸೇರಿದರೆ ಸಾಗರ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲದೇ ಆಹಾರ ಸರಪಳಿ ಮೂಲಕ ಮಾನವನ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಬೀರಲಿದೆ. ಕಾಲುವುವೆಯು ಎಂಜಿ. ರಸ್ತೆಯಿಂದ ಬರುತ್ತದೆ. ಆದರೆ ಈ ಮಾರ್ಗದಲ್ಲಿ ಗ್ಯಾರೇಜ್ ಅಥವಾ ಹೊಟೇಲುಗಳು ಇಲ್ಲ. ಆದರೆ ಹೆದ್ದಾರಿಯ ಮೇಲ್ಸೇತುವೆಯ ಕೆಳಗೆ ಲಾರಿಗಳು ನಿಲ್ಲುವ ಕಾರಣ ಚಾಲಕರು ಹಳೆಯ ಆಯಿಲ್ ನೀರಿಗೆ ಸುರಿದಿರುವ ಅನುಮಾಣ ವ್ಯಕ್ತವಾಗಿದೆ.

ಕಾಲುವೆಯಲ್ಲಿ ಕಂಡುಬಂದಿರುವ ದ್ರಾವಣವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮಳೆಗಾಲದ ಅವಧಿಯಲ್ಲಿ ಸಮುದ್ರದ ನೀರು ಕಾಲುವೆಯ ವಿರುದ್ಧ ದಿಕ್ಕಿಗೆ ಹರಿದು ಬಂದು ಕಾಲುವೆಯಲ್ಲಿ ನೀರು ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಜೆಸಿಬಿ ಮೂಲಕ ಕಾಲುವೆಯ ನೀರು ಸರಾಗವಾಗಿ ಹರಿದು ಸಮುದ್ರಕ್ಕೆ ಸೇರುವಂತೆ ಮಾಡಲಾಗಿದೆ ಎಂದು ನಗರಸಭೆಯ ಆಯುಕ್ತ ಜಗದೀಶ ಹುಲಗೆಜ್ಜಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

20/06/2025 06:17 pm

Cinque Terre

5.56 K

Cinque Terre

0

ಸಂಬಂಧಿತ ಸುದ್ದಿ