", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1750856877-Audion.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿಗ್ಗಾವಿ: ಕಂಟ್ರಾಕ್ಟರ್ ಶಿವಾನಂದ ಬರ್ಬರ ಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹತ್ಯೆಯ ಕಹಾನಿ ಬಿಚ್ಚಿಟ್ಟ ಕೊಲೆ ಆರೋಪಿಯ ಆಡಿಯೋ ವೈರಲ್ ಇದೀಗ ...Read more" } ", "keywords": "Shiggaon contractor murder case, Shivananand murder accused audio, contract killing allegations, audio leak controversy, Shivananand murder investigation, accused confession audio.", "url": "https://dashboard.publicnext.com/node" } ಶಿಗ್ಗಾವಿ: ಆತ ನನ್ನ ಕೊಲೆಗೆ ಸುಪಾರಿ ನೀಡಿದ್ದ, ಹೀಗಾಗಿ ನಾನೇ ಮುಗಿಸಿಬಿಟ್ಟೆ - ಕಂಟ್ರಾಕ್ಟರ್ ಶಿವಾನಂದ ಕೊಲೆ ಆರೋಪಿಯ ಆಡಿಯೋ ವೈರಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಆತ ನನ್ನ ಕೊಲೆಗೆ ಸುಪಾರಿ ನೀಡಿದ್ದ, ಹೀಗಾಗಿ ನಾನೇ ಮುಗಿಸಿಬಿಟ್ಟೆ - ಕಂಟ್ರಾಕ್ಟರ್ ಶಿವಾನಂದ ಕೊಲೆ ಆರೋಪಿಯ ಆಡಿಯೋ ವೈರಲ್

ಶಿಗ್ಗಾವಿ: ಕಂಟ್ರಾಕ್ಟರ್ ಶಿವಾನಂದ ಬರ್ಬರ ಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹತ್ಯೆಯ ಕಹಾನಿ ಬಿಚ್ಚಿಟ್ಟ ಕೊಲೆ ಆರೋಪಿಯ ಆಡಿಯೋ ವೈರಲ್ ಇದೀಗ ವೈರಲ್ ಆಗಿದೆ. ಕೊಲೆ ಆರೋಪಿ ಆಶ್ರಫ್ ಆಪ್ತರಿಗೆ ಕರೆ ಮಾಡಿ ಮಾತನಾಡಿದ ಆಡಿಯೋ ವೈರಲ್ ಆಗಿದೆ.

ಕ್ಲಾಸ್ ಒನ್ ಕಾಂಟ್ರಾಕ್ಟರ್ ಶಿವಾನಂದ ಕುನ್ನೂರು ಆರೋಪಿ ಆಶ್ರಫ್ ಕೊಲೆಗೆ ಸಂಚು ರೂಪಿಸಿದ್ನಂತೆ. ಈ ಬಗ್ಗೆ ಫೋನ್ನಲ್ಲಿ ಮಾತನಾಡಿದ ಅಶ್ರಫ್ ಶಿವಾನಂದ ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದ. 20 ಲಕ್ಷ ರೂಪಾಯಿಗೆ ನನ್ನನು ಕೊಲ್ಲಲು ಹುಬ್ಬಳ್ಳಿ ಹುಡುಗರಿಗೆ ಸುಪಾರಿ ಕೊಟ್ಟಿದ್ದ. ಮುಂಜಾನೆ ನನ್ನ ಮನೆಗೆ ಬಂದು ಎತ್ತಾಕೊಂಡು ಹೋಗಿ ಬೆತ್ತಲೆ ಮಾಡಿ ಥಳಿಸಿದ್ದರು. ನಾನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದೇನೆ. ಮತ್ತೆ ನನ್ನ ಹುಡುಕಿಕೊಂಡು ಶಿವಾನಂದ ಒಬ್ಬನೇ ಬಂದಿದ್ದ. ಆಗ ನನ್ನ ಸ್ನೇಹಿತರನ್ನ ಕರೆಸಿ ಕತ್ತು ಕತ್ತರಿಸಿದ್ದೇನೆ. ನಾನು ಬರೋವರೆಗೂ ನನ್ನ ಫ್ಯಾಮಿಲಿ ನೋಡಿಕೋ. ನಾನು ತಪ್ಪು ಮಾಡಿದ್ದೇನೆ. ನನ್ನ ಮನೆಯವರನ್ನ ನೋಡಿಕೊಂಡು ಹೋಗು ಅಣ್ಣಾ. ನಾನು ಸರೆಂಡರ್ ಆಗುತ್ತೇನೆ. ಶಿವಾನಂದ ಹೆಣ್ಣುಮಕ್ಕಳ ಜೊತೆಗೆ ಇದ್ದ ಫೋಟೋ ನನ್ನ ಕಡೆ ಇದ್ದವು. ಫೋಟೊಗಳನ್ನು ತೆಗೆದುಕೊಳ್ಳಲಿಕ್ಕೆ ನನಗೆ ಹೊಡೆದು ಹಿಂಸೆ ಕೊಟ್ಟಿದ್ದಾನೆ. ಆತ ನನ್ನ ಕೊಲೆಗೆ ಸುಪಾರಿ ನೀಡಿದ್ದ. ಹೀಗಾಗಿ ನಾನೇ ಮುಗಿಸಿ ಬಿಟ್ಟಿದ್ದೇನೆ ಎಂದು ಕೊಲೆ ಆರೋಪಿ ಆಶ್ರಫ್ ಆಪ್ತರ ಜೊತೆಗೆ ಮಾತನಾಡಿದ್ದಾನೆ.

Edited By : Manjunath H D
PublicNext

PublicNext

25/06/2025 06:38 pm

Cinque Terre

36.16 K

Cinque Terre

1

ಸಂಬಂಧಿತ ಸುದ್ದಿ