ನವಲಗುಂದ: ಯುಗಾದಿ ಉತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಾಳೆ ಯುಗಾದಿ ಪಾಡ್ಯದ ದಿನದಂದು ಭವ್ಯ ಶೋಭಾಯಾತ್ರೆ ಆಯೋಜನೆ ಮಾಡಲಾಗಿದೆ.
ನಗರದ ಗಣಪತಿ ದೇವಸ್ಥಾನದಿಂದ ಮಧ್ಯಾಹ್ನ 3ಘಂಟೆಗೆ ಗೋಮಾತೆಯ ಪೂಜೆ ನೆರವೇರಿಸಿ ನಂತರ ರಥದಲ್ಲಿ ಭಾರತ ಮಾತೆಯ ವಿಗ್ರಹದೊಂದಿಗೆ ಹಾಗೂ ಮಠಾಧೀಶರ ನೇತೃತ್ವದಲ್ಲಿ ಸಕಲ ಮಂಗಲ ವಾದ್ಯಗಳೊಂದಿಗೆ ಭವ್ಯ ಶೋಭಾಯಾತ್ರೆ ಪ್ರಾರಂಭಗೊಂಡು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸುವುದು.
ತಾಲೂಕಿನ ಜನತೆ ಮತ್ತು ಯುವಕರು ಪಾಲ್ಗೊಂಡು ಶೋಭಾಯಾತ್ರೆ ಯಶಸ್ವಿಗೊಳಿಸಬೇಕು ಎಂದು ಯುಗಾದಿ ಉತ್ಸವ ಕಮೀಟಿ ಪ್ರಕಟಣೆಗೆ ತಿಳಿಸಿದ್ದಾರೆ.
Kshetra Samachara
18/03/2026 02:08 pm
LOADING...