ಉಡುಪಿ: ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ, ಅಟೋ ಸ್ಟ್ಯಾಂಡ್ ಹತ್ತಿರ ಗಾಯಾಳು ಹೆಬ್ಬಾವೊಂದನ್ನು ರಕ್ಷಿಸಲಾಗಿದೆ.
ರೈಲ್ವೆ ಪ್ರಯಾಣಿಕರ ಸಂಚಾರ ಇರುವ ಸ್ಥಳದಲ್ಲಿ ಹೆಬ್ಬಾವಿನ ಚಲನವಲನವನ್ನು ಗಮನಿಸಿದ ಅಟೋ ಚಾಲಕ ಪ್ರಶಾಂತ್ ಎನ್ನುವವರು, ಹಾವು ಹಿಡಿಯುವ ಪರಿಣಿತಿ ಹೊಂದಿರುವ ಅಟೋಚಾಲಕ ಬಶೀರ್ ಎನ್ನುವರನ್ನು ಸ್ಥಳಕ್ಕೆ ಕರಿಸಿಕೊಂಡರು. ಅವರು ಹೆಬ್ಬಾವಿನ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹೆಬ್ಬಾವು ರಸ್ತೆ ದಾಟುವ ಸಂದರ್ಭ ದ್ವಿಚಕ್ರ ವಾಹನ ಮೈಮೇಲೆ ಚಲಿಸಿದ ಕಾರಣದಿಂದ ಗಾಯಾಳಾಗಿದೆ. ಹೆಬ್ಬಾವನ್ನು ಪಶುವೈದ್ಯರಲ್ಲಿ ಚಿಕಿತ್ಸೆಗೆ ಒಳಪಡಿಸಿ, ಬಳಿಕ ಸುರಕ್ಷಿತ ಸ್ಥಳದಲ್ಲಿ ಬಿಡುಗಡೆಗೊಳಿಸಲಾಯಿತು.
PublicNext
21/03/2026 05:36 pm
LOADING...