ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ವರ್ಗಾವಣೆಗೊಂಡು ಬಂದ ಮೊದಲ ದಿನವೇ ಶಿಕ್ಷಕ ಮಹಾದೇಶ್ವರಸ್ವಾಮಿ ಅವರು ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧಿವಾದವನ್ನು ಪ್ರದರ್ಶಿಸಿದ್ದಾರೆ.
ಹೊಂಗಳ್ಳಿ ಶಾಲೆಯಿಂದ ಕುಂದಕೆರೆಗೆ ವರ್ಗಾವಣೆಗೊಂಡ ಅವರು, ಸ್ವಚ್ಛತೆ ಮತ್ತು ಪರಿಸರಕ್ಕೆ ಆದ್ಯತೆ ನೀಡುವ ತಮ್ಮ ನಿಲುವನ್ನು ಈ ಮೂಲಕ ಪ್ರದರ್ಶಿಸಿ ಜನರ
ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಹಿಂದೆಯೂ ಹೊಂಗಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ವೇಳೆ ಶಾಲೆಯ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ಸಲುವಾಗಿ ವಿವಿಧ ಬಗೆಯ ಹೂವಿನ ಗಿಡಗಳು ಹಾಗೂ ಹಣ್ಣಿನ ಗಿಡ ಬೆಳೆಸಿದ್ದರು. ಇದರಿಂದ ಶಾಲೆಯ ವಾತಾವರಣ ಹಸಿರಾಗಿ ಕಂಡು ಬಂದಿತ್ತು.
Kshetra Samachara
16/04/2026 05:30 pm
LOADING...